alex Certify ರಾತ್ರಿ ಮನೆಯವರೆಲ್ಲ ಮಲಗುತ್ತಿದ್ದಂತೆ ಘೋರ ಕೃತ್ಯವೆಸಗಿದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮನೆಯವರೆಲ್ಲ ಮಲಗುತ್ತಿದ್ದಂತೆ ಘೋರ ಕೃತ್ಯವೆಸಗಿದ ವ್ಯಕ್ತಿ

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ನಿಂದ ಹೊಡೆದು ಪತ್ನಿ ಮತ್ತು ಮಗನನ್ನು ಕೊಲೆ ಮಾಡಿದ್ದಾನೆ. ಮತ್ತೊಬ್ಬ ಪುತ್ರನ ಮೇಲೆಯೂ ಹಲ್ಲೆ ಮಾಡಿದ್ದು ಆತ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದಾನೆ.

ಶ್ರೀಗಂಗಾನಗರದ ಆರ್ಯನ್ ಗ್ರಾಮದ 50 ವರ್ಷದ ಸತ್ನಮ್ ಸಿಂಗ್ ಇಂತಹ ಕೃತ್ಯವೆಸಗಿದ ಆರೋಪಿ. ಪತ್ನಿಯೊಂದಿಗೆ ಅನೇಕ ವರ್ಷಗಳಿಂದ ಜಗಳವಾಡುತ್ತಿದ್ದ ಆರೋಪಿ ಭಾನುವಾರ ರಾತ್ರಿ ಪತ್ನಿ ಮತ್ತು ಮಕ್ಕಳೊಂದಿಗೆ ಮತ್ತೆ ಜಗಳವಾಡಿದ್ದಾನೆ. ಜಗಳದ ನಂತರ ಮನೆಯವರು ಮಲಗಿದ್ದ ವೇಳೆಯಲ್ಲಿ ಕಬ್ಬಿಣದ ರಾಡ್ ನಿಂದ ಹೊಡೆದು 20 ವರ್ಷದ ಮಗ ಮತ್ತು ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಕಿರಿಯ ಪುತ್ರನ ಮೇಲೆಯೂ ದಾಳಿ ಮಾಡಲು ಮುಂದಾಗಿದ್ದು ಆತ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾನೆ.

ಹತ್ಯೆ ನಂತರ ಆರೋಪಿ ಪರಾರಿಯಾಗಿದ್ದು ಹುಡುಕಾಟ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...