alex Certify ಕೊರೊನಾಗೆ ಔಷಧವೆಂದು ಹಾವನ್ನೇ ಕಚ್ಚಿ ತಿಂದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾಗೆ ಔಷಧವೆಂದು ಹಾವನ್ನೇ ಕಚ್ಚಿ ತಿಂದ ಭೂಪ…!

ಕೋವಿಡ್-19ಗೆ ಮದ್ದು ಎಂದು ಹೇಳಿಕೊಂಡು ವಿಷಪೂರಿತ ಹಾವೊಂದನ್ನು ಕೊಂದು ತಿನ್ನಲು ಮುಂದಾದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ದಂಡ ವಿಧಿಸಿದ್ದಾರೆ.

ತಿರುನೆಲ್ವೇಲಿ ಜಿಲ್ಲೆಯ ಪೆರುಮಾಳ್‌ಪಟ್ಟಿ ಎಂಬ ಊರಿನ ನಿವಾಸಿಯಾದ 50ರ ಹರೆಯದ ವಡಿವೇಲ್ ಎಂಬ ಈತ ಕೋವಿಡ್-19ಗೆ ಹಾವಿನ ಮಾಂಸ ಉತ್ತಮ ಔಷಧ ಎಂದು ಹೇಳಿಕೊಂಡಿದ್ದ. ಪ್ರಾಣಿಗೆ ಜೀವ ಹಾನಿ ಮಾಡಿದ ಕಾರಣಕ್ಕೆ 7,500 ರೂ.ಗಳನ್ನು ದಂಡದ ರೂಪದಲ್ಲಿ ಈಗ ಕಟ್ಟಬೇಕಾಗಿ ಬಂದಿದೆ.

12ರಿಂದ 15 ವಯಸ್ಸಿನವರಿಗೆ ಫೈಜರ್​ ಲಸಿಕೆ ನೀಡಲು​ ಅನುಮತಿ

ಈತ ಕಟ್ಟಿನ ಹಾವನ್ನು ಕೊಂದಿದ್ದು ಅದರ ದೇಹವು ಮೋರಿಯೊಂದರಲ್ಲಿ ಸಿಕ್ಕಿದೆ ಎಂದು ಮದುರೈ ಜಿಲ್ಲಾ ಅರಣ್ಯಾಧಿಕಾರಿ ಎಸ್ ಆನಂದ್ ತಿಳಿಸಿದ್ದಾರೆ.

ಡಿಜಿಟಲೀಕರಣಗೊಳ್ಳಲಿದೆ ಶ್ರೀರಂಗಂ ದೇವಸ್ಥಾನದ ತಾಳೆ ಗರಿ

ಈ ಕೆಲಸ ಮಾಡುವ ಅವಧಿಯಲ್ಲಿ ವಡಿವೇಲ್ ಕುಡಿತದ ಅಮಲಿನಲ್ಲಿದ್ದು, ಆತನಿಗೆ ಹೀಗೆ ಮಾಡಲು ಸುತ್ತಲಿದ್ದ ಜನರು ಪ್ರೇರಣೆ ಕೊಟ್ಟಿದ್ದರು ಎಂದು ತಿಳಿದುಬಂದಿದೆ. ಅದೃಷ್ಟವಶಾತ್‌ ಈ ವ್ಯಕ್ತಿ ಹಾವಿನ ವಿಷದ ಗ್ರಂಥಿಗಳನ್ನು ಕಚ್ಚಿರದೇ ಇದ್ದ ಕಾರಣ ಬದುಕುಳಿದಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...