ಮುಂಬೈ: ಮಹಾರಾಷ್ಟ್ರ ಕೊರೋನಾ ಸೊಂಕಿನಿಂದ ತತ್ತರಿಸಿ ಹೋಗಿದ್ದು ರಾಜ್ಯದ ಜನರಿಗೆ ಉಚಿತ ವಿಮೆ ಘೋಷಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರ ಜನಸಾಮಾನ್ಯರಿಗೆ ಉಚಿತ ಮತ್ತು ಕ್ಯಾಶ್ ಲೆಸ್ ವಿಮೆ ನೀಡಲು ತೀರ್ಮಾನಿಸಿದೆ. ರಾಜ್ಯ ಆರೋಗ್ಯ ಸಚಿವ ರಾಜೇಶ್ ತೋಪೆ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯದ ಶೇಕಡ 85 ರಷ್ಟು ಜನ ಮಹಾತ್ಮ ಜ್ಯೋತಿಬಾಪುಲೆ ಆರೋಗ್ಯ ಯೋಜನೆಯಡಿ ವಿಮಾ ಸೌಲಭ್ಯ ಪಡೆಯುತ್ತಿದ್ದಾರೆ. ಇನ್ನುಳಿದ ಶೇಕಡ 15 ರಷ್ಟು ಮಂದಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸಂಸ್ಥಾಪನಾ ದಿನದ ಅಂಗವಾಗಿ ಮಹಾರಾಷ್ಟ್ರ ಜನರಿಗೆ ಉಚಿತ ವಿಮೆ ಪರಿಹಾರ ಘೋಷಿಸಲಾಗಿದೆ. ಕೋರೋನಾ ಸೋಂಕಿತರೆಲ್ಲರಿಗೂ ವಿಮೆ ಅಡಿಯಲ್ಲಿ ಚಿಕಿತ್ಸೆ ಸುಲಭವಾಗಿ ದೊರೆಯಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ಶುಲ್ಕ ಪಡೆದು ಲೂಟಿ ಮಾಡುವುದನ್ನು ತಡೆಯುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.