alex Certify ʼಕೊರೊನಾʼ ಓಡಿಸಲು ವಿಮಾನ ನಿಲ್ದಾಣದಲ್ಲಿ ಪೂಜೆ ನೆರವೇರಿಸಿದ ಸಚಿವೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಓಡಿಸಲು ವಿಮಾನ ನಿಲ್ದಾಣದಲ್ಲಿ ಪೂಜೆ ನೆರವೇರಿಸಿದ ಸಚಿವೆ…!

ಮಧ್ಯ ಪ್ರದೇಶದಲ್ಲೂ ಕೊರೊನಾ ವೈರಸ್​ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೋವಿಡ್ ಸೋಂಕಿನ ವಿರುದ್ಧ ಈಗಾಗಲೇ ದೇಶಾದ್ಯಂತ ಲಸಿಕೆಯ ಹೋರಾಟ ನಡೆಯುತ್ತಿದೆ. ಈ ನಡುವೆ ಮಧ್ಯ ಪ್ರದೇಶದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆ ಸಚಿವೆ ಉಷಾ ಠಾಕೂರ್​ ಕೊರೊನಾದಿಂದ ಮುಕ್ತಿಗಾಗಿ ದೇವರ ಮೊರೆ ಹೋಗಿದ್ದಾರೆ. ಇಂದೋರ್​ನಲ್ಲಿ ಅವರು ಮಾಸ್ಕ್​​ಗಳನ್ನ ಧರಿಸದೇ ಪೂಜಾ ಕಾರ್ಯ ನಡೆಸಿದ್ದು ಕಂಡು ಬಂತು.

ಇಂದೋರ್​ನ ವಿಮಾನ ನಿಲ್ದಾಣದಲ್ಲಿ ದೇವಿ ಅಹಿಲ್ಯಬಾಯಿ ಹೋಲ್ಕರ್​ ಪ್ರತಿಮೆ ಎದುರು ಉಷಾ ಠಾಕೂರ್​ ಪೂಜಾ ಕಾರ್ಯವನ್ನ ನಡೆಸಿದ್ರು. ದೇವತೆಯ ಎದುರು ಚಪ್ಪಾಳೆ ತಟ್ಟುತ್ತಾ ಮಂತ್ರಗಳನ್ನ ಪಠಿಸಿದ್ದಾರೆ. ಈ ಪೂಜಾ ಕಾರ್ಯಕ್ಕೆ ವಿಮಾನ ನಿಲ್ದಾಣ ನಿದೇಶಕಿ ಆರ್ಯಮಾ ಸನ್ಯಾಸ್​ ಹಾಗೂ ಸಿಬ್ಬಂದಿ ಸಹ ಸಾಕ್ಷಿಯಾದ್ರು.

ಸಾರ್ವಜನಿಕ ಸ್ಥಳಗಳಲ್ಲಿ ಸಚಿವೆ ಉಷಾ ಠಾಕೂರ್ ಸಾಕಷ್ಟು ಬಾರಿ ಮಾಸ್ಕ್​ ಧರಿಸದೇ ಇರೋದು ಕಂಡುಬಂದಿದೆ. ವಿಧಾನಸಭಾ ಕಲಾಪದ ವೇಳೆ ಮಾಸ್ಕ್ ಏಕೆ ಧರಿಸುತ್ತಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಠಾಕೂರ್​, ನನಗೆ ಮಾಸ್ಕ್​ನ ಅವಶ್ಯಕತೆ ಇಲ್ಲ. ಯಾಕೆಂದರೆ ನಾನು ಪ್ರತಿ ದಿನ ಹೋಮ ಹವನ ಮಾಡುತ್ತೇನೆ ಹಾಗೂ ಹನುಮಾನ್​ ಚಾಲೀಸಾ ಪಠಿಸುತ್ತೇನೆ ಎಂದು ಹೇಳಿದ್ರು.

ಈ ಹಿಂದೆ ಉಷಾ ಠಾಕೂರ್​​ ಮನೆಯಲ್ಲಿ ಬೆರಣಿಯಿಂದ ಹವನ ಮಾಡಿದ್ರೆ 12 ಗಂಟೆಗಳ ಕಾಲ ಮನೆ ಸ್ಯಾನಿಟೈಸ್​ ಆಗಿ ಇರಲಿದೆ ಎಂದು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...