alex Certify ದುಷ್ಟ ವಿಕಾಸ್ ದುಬೆಯನ್ನು ಆ ʼಶಿವʼನೇ ಬಲಿ ತೆಗೆದುಕೊಂಡ ಎಂದ ಉಮಾಭಾರತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಷ್ಟ ವಿಕಾಸ್ ದುಬೆಯನ್ನು ಆ ʼಶಿವʼನೇ ಬಲಿ ತೆಗೆದುಕೊಂಡ ಎಂದ ಉಮಾಭಾರತಿ

Lord Shiva Took 'Demon' Vikas Dubey's Life, Says BJP Leader Uma Bharti

ಉಜ್ಜಯನಿ, ಮಧ್ಯಪ್ರದೇಶ: ಉತ್ತರಪ್ರದೇಶ ಪೊಲೀಸರ ಎನ್ಕೌಂಟರ್ ಗೆ ಬಲಿಯಾದ ಕುಖ್ಯಾತ ರೌಡಿ ಶೀಟರ್, ಪಾತಕಿ ವಿಕಾಸ್ ದುಬೆ ಸಾವು ನಿಜವಾಗಿ ಶಿವನಿಂದ ಆಗಿದೆ. ಮಹಾದೇವನಾಗಿರುವ ಶಿವನೇ ಆತನನ್ನು ಕರೆಸಿಕೊಂಡಿದ್ದು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಹೇಳಿದ್ದಾರೆ.

8 ಪೊಲೀಸರನ್ನು ಕೊಂದು ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದ ದುಬೆಯನ್ನು ಉಜ್ಜಯಿನಿಯಲ್ಲೇ ಬಂಧಿಸಲಾಗಿದೆ. ಅಲ್ಲದೆ, ಆತ ಉಜ್ಜಯಿನಿಗೆ ಹೇಗೆ ಬಂದ? ಎಷ್ಟು ದಿನಗಳಿಂದ ಉಜ್ಜಯಿನಿಯ ಮಹಾಕಾಲ ದೇಗುಲದಲ್ಲಿ ಇದ್ದ? ಸಿಸಿಟಿವಿ ಫೂಟೇಜ್ ನಲ್ಲಿ ಇದನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದ್ದರೂ ಯಾರ ಕಣ್ಣಿಗೂ ಕಾಣದಂತೆ ಇಷ್ಟು ಸಮಯ ಹೇಗೆ ತಪ್ಪಿಸಿಕೊಂಡ? ಇದೆಲ್ಲವೂ ಒಂದು ರಹಸ್ಯವೇ ಸರಿಯೆಂದು ಉಮಾಭಾರತಿ ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಇದೆಲ್ಲದರ ಹಿಂದೆ ಶಿವನೇ ಇದ್ದಾನೆ. ಆತ ಕರೆಸಿಕೊಂಡಿದ್ದರಿಂದಲೇ ದುಬೆ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆಂಬ ಅರ್ಥದಲ್ಲಿ ಹೇಳಿದ್ದಾರೆ. ಅಲ್ಲದೆ, ಆತ ಉಜ್ಜಯಿನಿಗೆ ಹೋದ ವಿಷಯದ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಹಾಗೂ ಗೃಹಮಂತ್ರಿಗಳ ಜೊತೆ ಚರ್ಚಿಸುವುದಾಗಿ ಉಮಾಭಾರತಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...