ನವದೆಹಲಿ: ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಾಲ್ಕು ತಿಂಗಳನ್ನು ಕಳೆದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
5ನೇ ಬಾರಿಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು. ಕೊರೋನಾದಿಂದಾಗಿ ಹಲವರು ತಮ್ಮವರನ್ನು ಕಳೆದುಕೊಂಡಿದ್ದಾರೆ. 4 ತಿಂಗಳಿನಿಂದ ಕೊರೋನಾ ವಿರುದ್ಧ ವಿಶ್ವದ ಹೋರಾಟ ನಡೆಯುತ್ತಿದ್ದು ಎಲ್ಲರೂ ಜೀವ ಉಳಿಸಿಕೊಳ್ಳಲು ಯುದ್ಧ ನಡೆಸುವಂತಾಗಿದೆ. 3 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು 1 ವೈರಸ್ ಜಗತ್ತನ್ನೇ ಕಾಡುತ್ತಿದೆ ಎಂದು ಹೇಳಿದ್ದಾರೆ.
ಜಗತ್ತು ಸಂಕಷ್ಟದಲ್ಲಿದೆ. ನಾವು ಜೀವವನ್ನು ಉಳಿಸಬೇಕು. ಇದರೊಂದಿಗೆ ಮುನ್ನಡೆಯಬೇಕಿದೆ. ಹಿಂದೆಂದೂ ಕಂಡಿರದ ಸಂಕಷ್ಟ ಎದುರಾಗಿದೆ. ಸೋಂಕಿಗೆ ಸೋಲುವುದು, ಹಿಂಜರಿಯುವುದು ಮನುಷ್ಯರಿಗೆ ಇಷ್ಟವಿಲ್ಲ. ಇಂತಹ ಯುದ್ಧದ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಭವಿಷ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.