alex Certify Shocking: ದೇಶದ 10 ರಾಜ್ಯಗಳಲ್ಲಿ ಕೊರೊನಾ ಲಸಿಕೆಗಳ ಅಭಾವ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ದೇಶದ 10 ರಾಜ್ಯಗಳಲ್ಲಿ ಕೊರೊನಾ ಲಸಿಕೆಗಳ ಅಭಾವ..!

ದೇಶದಲ್ಲಿ ಕೊರೊನಾ ಕೇಸ್​ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರೋ ಬೆನ್ನಲ್ಲೇ ದೇಶದ 10 ರಾಜ್ಯಗಳು ಕೋವಿಡ್​ ಲಸಿಕೆಯ ಅಭಾವವವನ್ನ ಎದುರಿಸುತ್ತಿವೆ.

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಬುಧವಾರ ವ್ಯಾಕ್ಸಿನೇಷನ್​ ಡ್ರೈವ್​ ಕಾರ್ಯಕ್ರಮವನ್ನ ನಿಲ್ಲಿಸಲಾಗಿದೆ. ಕೇವಲ 20 ಡೋಸ್​ ಲಸಿಕೆ ಬಾಕಿ ಉಳಿದ್ದಿದ್ದರಿಂದ ಅನಿವಾರ್ಯವಾಗಿ ಲಸಿಕೆ ಕೇಂದ್ರಗಳನ್ನ ಬಂದ್​ ಮಾಡಲಾಗಿತ್ತು.

ಇತ್ತ ಯವತ್ಮಾಲ್​, ಅಕೋಲಾ. ಬುಲ್ಧಾನಾ ಹಾಗೂ ವಾಶಿಗಳಲ್ಲೂ ಲಸಿಕೆ ನೀಡಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ.ಇನ್ನುಳಿದಂತೆ ಒಡಿಶಾ, ಆಂಧ್ರಪ್ರದೇಶ, ಪಂಜಾಬ್​, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ್​, ಚತ್ತೀಸಗಢ, ಬಿಹಾರ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಇನ್ನೊಂದು ಮೂರ್ನಾಲ್ಕು ದಿನಗಳಿಗೆ ಆಗುವಷ್ಟು ದಾಸ್ತಾನು ಮಾತ್ರ ಉಳಿದಿದೆ. ಇದರಿಂದ ಲಸಿಕೆ ನೀಡಿಕೆ ವೇಗವನ್ನ ಹೆಚ್ಚಿಸಬೇಕು ಎಂಬ ಕೇಂದ್ರ ಸರ್ಕಾರದ ಪ್ಲಾನ್​ಗೆ ಹಿನ್ನಡೆಯಾದಂತಾಗಿದೆ.

ಹೆಚ್ಚಿನ ರಾಜ್ಯಗಳು ಶೀಘ್ರದಲ್ಲೇ ಲಸಿಕೆಯನ್ನ ಪೂರೈಕೆ ಮಾಡಿ ಅಂತಾ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಒಡಿಶಾ ರಾಜ್ಯಕ್ಕೆ ಏಪ್ರಿಲ್​ 15ರ ಬಳಿಕ 3.49 ಲಕ್ಷ ಡೋಸ್​ ಕೋವಿಶೀಲ್ಡ್ ಲಸಿಕೆ ಸಿಗಲಿದೆ ಎನ್ನಲಾಗಿದೆ. ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ತ ಕುಮಾರ್​ ಮೊಹಾಪಾತ್ರ ಮಂಗಳವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​ಗೆ ಪತ್ರ ಬರೆಯುವ ಮೂಲಕ 15 ರಿಂದ 20 ಲಕ್ಷ ಕೋವಿಶೀಲ್ಡ್​ ಡೋಸ್​ಗಳನ್ನ ಶೀಘ್ರದಲ್ಲೇ ಒಡಿಶಾಗೆ ಪೂರೈಸಿ ಎಂದು ಮನವಿ ಮಾಡಿದ್ದರು. ಒಡಿಶಾದ ಬಳಿ ಇದೀಗ 6.5 ಲಕ್ಷ ಡೋಸ್​ ಲಸಿಕೆ ಬಾಕಿ ಉಳಿದಿದ್ದು ಇದರಲ್ಲಿ ಮೂರು ದಿನಗಳ ಕಾಲ ಲಸಿಕೆ ಕಾರ್ಯಕ್ರಮ ನಡೆಸಬಹುದಾಗಿದೆ.

ಆಂಧ್ರ ಪ್ರದೇಶದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಏಪ್ರಿಲ್​ 15ರ ಬಳಿಕ 10.8 ಲಕ್ಷ ಡೋಸ್​ ಲಸಿಕೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಿರುವ ಲಸಿಕೆಯಲ್ಲಿ ಇನ್ನೊಂದು ಮೂರ್ನಾಲ್ಕು ದಿನ ತಳ್ಳಬಹುದಾಗಿದೆ.

ಪಶ್ಚಿಮ ಬಂಗಾಳಕ್ಕೆ ಲಸಿಕೆಯ ಮರುಪೂರೈಕೆ ಯಾವಾಗ ಆಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಬುಧವಾರದ ಲಸಿಕೆ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ 12 ಲಕ್ಷ ಡೋಸ್​ ಬಾಕಿ ಉಳಿದಿದೆ.

ಉತ್ತರ ಪ್ರದೇಶ ಆರೋಗ್ಯ ಸಚಿವ ಜೈ ಪ್ರತಾಪ್​ ಸಿಂಗ್​​ ರಾಜ್ಯದಲ್ಲಿ ಕೊರೊನಾ ಲಸಿಕೆಯ ಅಭಾವವಿದೆ ಎಂದು ಹೇಳಿಕೆ ನೀಡಿದ್ದರು. ಸದ್ಯ ಉತ್ತರ ಪ್ರದೇಶದಲ್ಲಿ 12.33 ಲಕ್ಷ ಡೋಸ್​ಗಳಿದ್ದು, ಇದರಲ್ಲಿ ಮೂರ್ನಾಲ್ಕು ದಿನ ಲಸಿಕೆ ಅಭಿಯಾನ ನಡೆಸಬಹುದಾಗಿದೆ. ಪಂಜಾಬ್​ನಲ್ಲಿ 5 ಲಕ್ಷ ಡೋಸ್​ಗಳ ದಾಸ್ತಾನಿದ್ದು 4 ದಿನಗಳವರೆಗೆ ಯಾವುದೇ ಚಿಂತೆ ಇಲ್ಲ. ಪಂಜಾಬ್​ ಕೇಂದ್ರ ಸರ್ಕಾರದ ಬಳಿಕ 15 ಲಕ್ಷ ಡೋಸ್​ಗಳ ಪೂರೈಕೆಗೆ ಬೇಡಿಕೆ ಇಟ್ಟಿದೆ. ರಾಜಸ್ಥಾನ, ಬಿಹಾರ, ಚತ್ತೀಸಗಢ ಹಾಗೂ ಉತ್ತರಾಖಂಡ್​​ನಲ್ಲೂ ಇದೇ ಪರಿಸ್ಥಿತಿ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...