alex Certify ಚಿರತೆಯನ್ನ ಕೊಂದು ಬೇಯಿಸಿ ತಿಂದಿದ್ದ ಪಾಪಿಗಳು ಅಂದರ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರತೆಯನ್ನ ಕೊಂದು ಬೇಯಿಸಿ ತಿಂದಿದ್ದ ಪಾಪಿಗಳು ಅಂದರ್.​..!

ಐವರು ಪುರುಷರು ಚಿರತೆಯನ್ನ ಕೊಂದು ಅದರ ಮಾಂಸವನ್ನ ಬೇಯಿಸಿ ತಿಂದ ಅಮಾನವೀಯ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ವಿ.ಪಿ.ಕುರಿಯಾಕೋಸ್ (74), ಸಾಲಿ ಕುಂಜಪ್ಪನ್ (54), ಸಿ.ಎಸ್.ಬಿನು (50), ವಿನ್ಸೆಟ್ (50 ) ಮತ್ತು ವಿನೋದ್ ಪಿಕೆ (45) ಯನ್ನು ಬಂಧಿಸಲಾಗಿದೆ.

ವಿನೋದ್​ ಹಾಗೂ ಕುರಿಯಾಕೋಸ್​​ ಮಂಕುಲಾರ್​ ಬಳಿಯ ಮುನಿಪಾರದಲ್ಲಿರುವ ಅರಣ್ಯದಿಂದ 100 ಮೀಟರ್​ ದೂರದಲ್ಲಿರುವ ಖಾಸಗಿ ಭೂಮಿಯಲ್ಲಿ ಬಲೆ ಇರಿಸಿದ್ದರು. ಈ ಬಲೆಯಲ್ಲಿ ಆರು ವರ್ಷ ವಯಸ್ಸಿನ ಗಂಡು ಚಿರತೆ ಬಂದು ಬಿದ್ದಿದೆ. ಈ ಚಿರತೆಯನ್ನ ವಿನೋದ್​ ಮನೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅದನ್ನ ಕೊಂದು ಬಳಿಕ ಮಾಂಸವನ್ನ ಬೇಯಿಸಿ ಸವಿದಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಮಾಹಿತಿ ಸಿಗುತ್ತಿದ್ದಂತೆಯೇ ವಿನೋದ್​ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ಬೇಯಿಸಿದ 10 ಕೆಜಿ ಚಿರತೆ ಮಾಂಸವನ್ನ ವಶಕ್ಕೆ ಪಡೆಯಲಾಗಿದೆ, ಈ ಪ್ರಕರಣ ಸಂಬಂಧ ಐವರನ್ನ ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...