alex Certify ʼಸಮಯಪ್ರಜ್ಞೆʼ ಅನ್ನೋದು ಎಷ್ಟು ಮುಖ್ಯ ಎಂಬುದನ್ನು ಪುಷ್ಟೀಕರಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಮಯಪ್ರಜ್ಞೆʼ ಅನ್ನೋದು ಎಷ್ಟು ಮುಖ್ಯ ಎಂಬುದನ್ನು ಪುಷ್ಟೀಕರಿಸುತ್ತೆ ಈ ವಿಡಿಯೋ

ಸಮಯ ಪ್ರಜ್ಞೆ ಅನ್ನೋದು ಸರಿಯಾಗಿ ಇತ್ತು ಅಂದರೆ ಸಾಕು ಎಂತಾ ದೊಡ್ಡ ಅಪಾಯದಿಂದ ಬೇಕಿದ್ದರೂ ಪಾರಾಗಬಹುದು. ಕೇರಳದ ಥಯ್ಯಿಲ್​​ ಮಿತ್ತಲ್​ ಬಾಬುರಾಜ್​ ಎಂಬವರು ಕಟ್ಟಡದ ಮೊದಲ ಮಹಡಿಯಿಂದ ಆಯತಪ್ಪಿ ಕೆಳಗೆ ಬೀಳುತ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ್ದು ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ಗಿಟ್ಟಿಸಿಕೊಳ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲಿ, ಬಾಬುರಾಜು, ಬಿನು ಎಂಬ ವ್ಯಕ್ತಿಯ ಪಕ್ಕದಲ್ಲೇ ನಿಂತಿದ್ದರು. ಇವರಿಬ್ಬರು ಕೇರಳ ಬ್ಯಾಂಕ್​​ನ ವಾದಕರ ಶಾಖೆಯ ಸಿಬ್ಬಂದಿಯಾಗಿದ್ದಾರೆ. ತಮ್ಮ ಪ್ರಾವಿಡೆಂಟ್​ ಫಂಡ್​ನ್ನು ಪಾವತಿ ಮಾಡಲು ಇವರಿಬ್ಬರು ತಮ್ಮ ಸರದಿಯಾಗಿ ಕಾಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಸಿಸಿ ಟಿವಿ ದೃಶ್ಯಾವಳಿಯಲ್ಲಿ ಬಿನು ಆಯತಪ್ಪಿ ಬೀಳುತ್ತಿರೋದನ್ನ ನೀವು ಕಾಣಬಹುದಾಗಿದೆ. ಬಿನು ಪಕ್ಕದಲ್ಲೇ ನಿಂತಿದ್ದ ಬಾಬುರಾಜ್​ ಬಿನು ಕಾಲನ್ನ ಹಿಡಿದುಕೊಂಡು ಅವರು ಕಟ್ಟಡದಿಂದ ಕೆಳಗೆ ಬೀಳೋದ್ರಿಂದ ತಪ್ಪಿಸಿದ್ದಾರೆ. ಕೂಡಲೇ ಅಲ್ಲೇ ಇದ್ದ ಇತರೆ ವ್ಯಕ್ತಿಗಳು ಹಾಗೂ ಪೊಲೀಸರು ಬಿನು ಕಾಲನ್ನ ಹಿಡಿದೆಳೆಯುವ ಮೂಲಕ ದೊಡ್ಡ ದುರಂತದಿಂದ ಬಿನುರನ್ನ ಬಚಾವ್​ ಮಾಡಿದ್ದಾರೆ.

— Anu Satheesh ?? (@AnuSatheesh5) March 19, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...