alex Certify ಪ್ರತಿಭಟನಾನಿರತ ರೈತರಿಗಾಗಿ 16 ಟನ್​ ಉಚಿತ ಅನಾನಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಭಟನಾನಿರತ ರೈತರಿಗಾಗಿ 16 ಟನ್​ ಉಚಿತ ಅನಾನಸ್​..!

ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕೇರಳದ ರೈತ ಸಂಘ ದೆಹಲಿಗೆ 16 ಟನ್​ ಅನಾನಸ್​ ಹಣ್ಣನ್ನ ಉಚಿತವಾಗಿ ಕಳುಹಿಸಿಕೊಟ್ಟಿದೆ.

ಪ್ರತಿಭಟನಾನಿರತ ರೈತರಿಗಾಗಿ ಕಳುಹಿಸಿಕೊಟ್ಟಲಾಗಿರುವ ಹಣ್ಣಿನ ಖರ್ಚು ಹಾಗೂ ಸಾರಿಗೆ ವೆಚ್ಚವನ್ನ ರೈತ ಸಂಘವೇ ಭರಿಸಲಿದೆ ಎಂದು ರೈತ ಸಂಘದ ನಾಯಕ ಜೇಮ್ಸ್ ತೊಟ್ಟುಮರಿಲ್​ ಹೇಳಿದ್ದಾರೆ.

ಭಾನುವಾರ ರೈತರು 16 ಟನ್​ ಅನಾನಸ್​ ಹಣ್ಣನ್ನ ಕಳುಹಿಸಿಕೊಟ್ಟಿದ್ದು ಸೋಮವಾರ ಸಂಜೆ ದೆಹಲಿಗೆ ತಲುಪುವ ಸಾಧ್ಯತೆ ಇದೆ. ಕೃಷಿ ಕಾನೂನನ್ನ ವಿರೋಧಿಸಿ ರೈತರು ಐತಿಹಾಸಿಕ ಆಂದೋಲವನ್ನ ನಡೆಸುತ್ತಿದ್ದಾರೆ. ಹೀಗಾಗಿ ಇಂತಹ ಸಂದರ್ಭದಲ್ಲಿ ನಮ್ಮ ಒಗ್ಗಟ್ಟನ್ನ ತೋರಿಸೋದು ಅನಿವಾರ್ಯವಾಗಿದೆ. ಪ್ರತಿಭಟನಾನಿರತರೊಂದಿಗೆ ನಾವಿದ್ದೇವೆ ಎಂದು ತೋರಿಸಲು ಈ ಕೆಲಸ ಮಾಡಿದ್ದೇವೆ ಅಂತಾ ತೊಟ್ಟುಮರಿಲ್​ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...