alex Certify ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲಿ ತರಕಾರಿ ಬೆಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲಿ ತರಕಾರಿ ಬೆಳೆ…!

Kerala Cops Turn Confiscated Cars into Organic Vegetable Gardens, Earn Praise on Twitter

ದೇಶದ ಹಲವು ಭಾಗದಲ್ಲಿ ಮುಟ್ಟುಗೋಲು ಹಾಕಿಕೊಂಡ ವಾಹನಗಳು ವರ್ಷವಾದರೂ, ವಿಲೇವಾರಿಯಾಗದೇ ನಿಂತಿರುವುದನ್ನು ನೋಡುವುದು ಸಾಮಾನ್ಯ. ಆದರೆ ಕೇರಳದ ಪೊಲೀಸರು ಈ ರೀತಿ ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲಿ ತರಕಾರಿ ಬೆಳೆಯುವ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ತ್ರಿಶೂರ್‌ ಜಿಲ್ಲೆಯ ಚೆರುಥುರೂರ್ತಿ ಎನ್ನುವ ಠಾಣೆಯಲ್ಲಿ ಈ ರೀತಿಯ ವಿನೂತನ ಪ್ರಯತ್ನಕ್ಕೆ ಸಿವಿಲ್‌ ಪೊಲೀಸರು ಮುಂದಾಗಿದ್ದಾರೆ. ರೈತನೊಬ್ಬ ಮೊದಲಿಗೆ ಮಿನಿ ಲಾರಿಯಲ್ಲಿ ಈ ರೀತಿ ತರಕಾರಿ ಬೆಳೆಗಳನ್ನು ಬೆಳೆದಿದ್ದು, ಬಳಿಕ ಇತರ ವಾಹನಗಳ ಮೇಲೆಯೂ ತರಕಾರಿ ಬೆಳೆಯಲಾಗುತ್ತಿದೆ. ಈ ರೀತಿ ವಾಹನಗಳನ್ನು ಬಳಸಿಕೊಳ್ಳುವುದರಿಂದ, ವ್ಯರ್ಥವಾಗಿ ನಿಂತಿರುವ ವಾಹನಗಳು ಬಳಕೆಗೆ ಯೋಗ್ಯವಾಗುತ್ತದೆ ಎನ್ನುವ ಮಾತನ್ನು ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿ‌ ಸಿಂಪ್ಸನ್‌ ಮಾತನಾಡಿದ್ದು, ಮಿನಿ ಲಾರಿಯಲ್ಲಿ ಈ ರೀತಿ ತರಕಾರಿ ಬೆಳೆಯುವ ಪ್ರಯತ್ನಕ್ಕೆ ಮುಂದಾದೆವು. ಇದಕ್ಕೆ ಬೇಕಿರುವ ಮಣ್ಣು, ಗೊಬ್ಬರವನ್ನು ಹಾಕಲಾಯಿತು. ಮೂರು ತಿಂಗಳ ಬಳಿಕ ಉತ್ತಮ ಇಳುವರಿ ನೀಡಿದ್ದರಿಂದ, ಇತರೆ ವಾಹನಗಳ ಮೇಲೆಯೂ ಪ್ರಯೋಗಿಸಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...