alex Certify ಮೈಮೇಲೆ ಭೂತ ಬರುತ್ತೆ ಅಂತಾ ಪತ್ನಿಯನ್ನೇ ಕೊಂದ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಮೇಲೆ ಭೂತ ಬರುತ್ತೆ ಅಂತಾ ಪತ್ನಿಯನ್ನೇ ಕೊಂದ ಪತಿ…!

ರಾಯ್​ಪುರದ ಮಂದಿರ್​ ಹಸೌದ್​ ಏರಿಯಾದಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದ 35 ವರ್ಷದ ಸ್ಮಿತಾ ಬೋಪ್ಜೆ ಪ್ರಕರಣವನ್ನ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈಕೆಯನ್ನ ಮತ್ಯಾರೂ ಅಲ್ಲ ಬದಲಾಗಿ ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಜನವರಿ 18ರಂದು ಮಹಿಳೆಯ ಮೃತದೇಹ ಬಯಲು ಪ್ರದೇಶವೊಂದರಲ್ಲಿ ಪತ್ತೆಯಾಗಿತ್ತು. ಆಕೆಯ ದೇಹದ ತುಂಬೆಲ್ಲ ಗಾಯದ ಕಲೆಗಳಿದ್ದವು. ಮಾತ್ರವಲ್ಲದೇ ಆಕೆಯ ಮುಖವನ್ನ ಜಜ್ಜಿ ಹಾಕೋದ್ರ ಮೂಲಕ ಗುರುತು ಕಾಣದಂತೆ ಮಾಡಲಾಗಿತ್ತು. ತನಿಖೆಯ ವೇಳೆ ಈಕೆಯ ಪತಿ ರಾಜೇಂದ್ರ ಬೋಪ್ಚೆ ಈ ಕೊಲೆ ಮಾಡಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.

ಮಾನಸಿಕವಾಗಿ ಅಸ್ವಸ್ಥೆಯಾಗಿದ್ದ ಈಕೆ ಭೂತಗಳನ್ನ ಹೆಚ್ಚಾಗಿ ನಂಬುತ್ತಿದ್ದಳು ಎನ್ನಲಾಗಿದೆ. ಅಲ್ಲದೇ ಆಗಾಗ್ಗೆ ಮೈ ಮೇಲೆ ಭೂತ ಬಂದವರಂತೆ ಆಡುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಇವರಿಬ್ಬರ ಬಗ್ಗೆ ಆಗಾಗ ಕಲಹ ಉಂಟಾಗುತ್ತಿತ್ತು. ಹೀಗಾಗಿ ಆಕೆಯ ತಲೆಗೆ ಕಲ್ಲಿನಿಂದ ಜಜ್ಜಿ ಪತಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ಪತಿಯನ್ನ ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...