ಚೆನ್ನೈ: ಚಿಕ್ಕಮ್ಮನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಇದನ್ನು ವಿರೋಧಿಸಿದ ಅತ್ತೆಯನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಬಾಲಾಜಿ ನಗರದ ಗಣೇಶನ್ ಕೊಲೆ ಆರೋಪಿಯಾಗಿದ್ದಾನೆ. ತನ್ನ ತಂದೆಯ ಸಹೋದರಿಯಾಗಿರುವ ಗುಣಸುಂದರಿ ಎಂಬುವರನ್ನು ಗಣೇಶನ್ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಗುಣಸುಂದರಿಯ ಹಿರಿಯ ಸಹೋದರನ ಪುತ್ರನಾದ ಗಣೇಶನ್ ಗೆ ಮದುವೆಯಾಗಿದ್ದು ಆತನ ಪತ್ನಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.
ಇದಾದ ನಂತರದಲ್ಲಿ ಗುಣಸುಂದರಿಯ ಕಿರಿಯ ಸಹೋದರ ತೀರಿಕೊಂಡಿದ್ದು ಆತನ ಪತ್ನಿಯೊಂದಿಗೆ ಗಣೇಶನ್ ಅಕ್ರಮ ಸಂಬಂಧ ಬೆಳೆಸಿದ್ದಾನೆ. ಇವರಿಬ್ಬರ ನಡುವಿನ ಸಂಬಂಧದ ವಿಚಾರ ಗೊತ್ತಾಗಿ ಗುಣಸುಂದರಿ ಗಲಾಟೆ ಮಾಡಿದ್ದಾರೆ. ಗಣೇಶನ್ ಮನೆಗೆ ಹೋಗಿ ಬುದ್ಧಿವಾದ ಹೇಳಿದ್ದು, ಈ ವೇಳೆ ಇಬ್ಬರ ನಡುವೆ ಜಗಳವಾಗಿ ಚಾಕುವಿನಿಂದ ಇರಿದ ಗಣೇಶನ್ ಅತ್ತೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.