alex Certify ಮೀನು ಖಾದ್ಯ ತಯಾರಿಸಲಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಪತ್ನಿ ಕೊಂದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಖಾದ್ಯ ತಯಾರಿಸಲಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಪತ್ನಿ ಕೊಂದ ಪಾಪಿ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಧ್ಯರಾತ್ರಿ ಪತ್ನಿ ಮೀನು ಬೇಯಿಸಲಿಲ್ಲ ಎನ್ನುವ ಕಾರಣಕ್ಕೆ ಪತಿ ರಾಕ್ಷಸನಾದ ಘಟನೆ ನಡೆದಿದೆ.

ಗರ್ಭಿಣಿ ಪತ್ನಿಯನ್ನು ಹೊಡೆದು ಕೊಂದಿದ್ದಾನೆ ಪತಿ. ಘಟನೆ ನಂತರ ಆರೋಪಿ ಪರಾರಿಯಾಗಿದ್ದ. ನಂತ್ರ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆಘಾತಕಾರಿ ಘಟನೆ ಶ್ಯಾಂಪೂರ್ ಗ್ರಾಮದಲ್ಲಿ ನಡೆದಿದೆ.

ಗ್ವಾಲಿಯರ್ ನಿವಾಸಿ ಮಿಥುನ್, ಶ್ಯಾಂಪೂರ್ ಗ್ರಾಮದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಿಥುನ್ ಜೊತೆಗೆ ಆತನ ಪತ್ನಿ ಅನಿತಾ ಕೂಡ ಕೆಲಸ ಮಾಡ್ತಿದ್ದಳು. ಮಿಥುನ್ ನಿನ್ನೆ ರಾತ್ರಿ ಗ್ವಾಲಿಯರ್‌ಗೆ ಬಂದು, ಮದ್ಯ ಸೇವಿಸಿ ಮೀನು ಖರೀದಿಸಿದ್ದಾನೆ. ತಡರಾತ್ರಿ ಫಾರ್ಮ್ ಹೌಸ್‌ಗೆ ಬಂದ ಮಿಥುನ್, ಪತ್ನಿ ಅನಿತಾಗೆ ಮೀನು ಬೇಯಿಸಲು ಹೇಳಿದ್ದಾನೆ. ಅನಿತಾ ಗರ್ಭಿಣಿಯಾಗಿದ್ದು, ಅನಾರೋಗ್ಯದ ಕಾರಣ ಮೀನು ಬೇಯಿಸಿರಲಿಲ್ಲ.

ಇದ್ರಿಂದ ಕೋಪಗೊಂಡ ಮಿಥುನ್ ಅನಿತಾಳನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದಾನೆ. ಘಟನೆಯ ನಂತರ ಆರೋಪಿ ಮಿಥುನ್ ಅಲ್ಲಿಂದ ಪರಾರಿಯಾಗಿದ್ದ. ಫಾರ್ಮ್‌ನಲ್ಲಿ ಕೆಲಸ ಮಾಡುವ ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...