ನವದೆಹಲಿ: ಲಾಕ್ಡೌನ್ ಜಾರಿಯಾಗಿರುವುದರಿಂದ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದ ವತಿಯಿಂದ 40,038.70 ಕೋಟಿ ರೂಪಾಯಿ ತೆರಿಗೆ ಹಣ ಬಿಡುಗಡೆ ಮಾಡಲಾಗಿದೆ.
2020 -21 ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿದ್ದ ಅನುದಾನ, ಜಿಎಸ್ಟಿ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯ ಸರ್ಕಾರಗಳಿಗೆ ಸಾವಿರಾರು ಕೋಟಿಗಳಷ್ಟು ಅನುದಾನ ಬರಬೇಕಿತ್ತು. ಈಗ ಒಟ್ಟಿಗೆ ಎಲ್ಲ ರಾಜ್ಯಗಳ ಪಾಲಿನ ತೆರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.
ಕರ್ನಾಟಕಕ್ಕೆ ಮೊದಲ ಕಂತಿನಲ್ಲಿ 1678.57 ಕೋಟಿ ರೂಪಾಯಿ ನೀಡಲಾಗಿದೆ. ಅದೇ ರೀತಿ ಆಂಧ್ರಪ್ರದೇಶಕ್ಕೆ 1892 ಕೋಟಿ ರೂ., ಗುಜರಾತ್ ಗೆ 1564 ಕೋಟಿ ರೂ. ಮತ್ತು ಕೇರಳಕ್ಕೆ 894 ಕೋಟಿ ರೂಪಾಯಿ ನೀಡಲಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ಸಂಗ್ರಹವಾದ ಜಿಎಸ್ಟಿ ಮೊತ್ತದಲ್ಲಿ ರಾಜ್ಯಗಳಿಗೆ ಶೇಕಡ 41 ರಷ್ಟು ನೀಡಬೇಕಿದೆ. ಪ್ರಸಕ್ತ ಬಜೆಟ್ ಪ್ರಕಾರ ಕೇಂದ್ರೀಯ ತೆರಿಗೆಗಳಲ್ಲಿ ರಾಜ್ಯಗಳ ಪಾಲು 7.84 ಲಕ್ಷ ಕೋಟಿ ರೂ. ಎಂದು ಹೇಳಲಾಗಿದೆ.