ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಕುತೂಹಲಕಾರಿ ಪ್ರಕರಣ ಹೊರಬಿದ್ದಿದೆ. ಲಾಕ್ ಡೌನ್ ಸಮಯದಲ್ಲಿ ವ್ಯಕ್ತಿಯೊಬ್ಬ ತರಕಾರಿ ಮತ್ತು ಪಡಿತರ ತರಲು ಹೊರಗೆ ಹೋಗಿದ್ದಾನೆ. ಆದರೆ ವಾಪಸ್ ಮನೆಗೆ ಬರುವ ವೇಳೆ ವಧುವನ್ನು ತನ್ನೊಂದಿಗೆ ಕರೆತಂದಿದ್ದಾನೆ.
ವಧು ಮನೆಗೆ ಬರ್ತಿದ್ದಂತೆ ಯುವಕನ ತಾಯಿ ಆಘಾತಕ್ಕೊಳ್ಳಗಾಗಿದ್ದಾಳೆ. ಕೋಪಗೊಂಡ ಹುಡುಗನ ತಾಯಿ ವಧುವನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಳು. ಇದ್ರಿಂದಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇಬ್ಬರು ಒಂದು ತಿಂಗಳ ಹಿಂದೆ ಹರಿದ್ವಾರದಲ್ಲಿ ಮದುವೆಯಾಗಿದ್ದರಂತೆ. ಆದ್ರೆ ಇದನ್ನು ನಂಬಲು ತಾಯಿ ಸಿದ್ಧವಿಲ್ಲ.
ಮೂವರೂ ಠಾಣೆಗೆ ಬಂದಿದ್ದರು. ತಾಯಿ ಲಾಕ್ ಡೌನ್ ಉಲ್ಲಂಘಿಸಿದ ಮಗನನ್ನು ಮನೆಯಲ್ಲಿಟ್ಟುಕೊಳ್ಳಲು ನಿರಾಕರಿಸಿದ್ದಾಳೆ. ಪೊಲೀಸರು ಬೇರೆ ಮನೆಯಲ್ಲಿರುವಂತೆ ದಂಪತಿಗೆ ಸೂಚನೆ ನೀಡಿದ್ದಾರೆ.