ತೆಲಂಗಾಣದ ರಾಜಧಾನಿ ಹೈದ್ರಾಬಾದ್ ನಲ್ಲಿ ಪ್ರಿಯತಮೆಗಾಗಿ ಯುವಕನೊಬ್ಬ ಕಳ್ಳತನಕ್ಕೆ ಇಳಿದಿದ್ದಾನೆ. 8.51 ಲಕ್ಷ ರೂಪಾಯಿ ಕಳ್ಳನತ ಮಾಡಿದ್ದ ವ್ಯಕ್ತಿ ನಂತ್ರ ಪೊಲೀಸರಿಗೆ ಸುಳ್ಳು ಕಥೆ ಹೇಳಿದ್ದಾನೆ.
ಹೈದ್ರಾಬಾದ್ ಪೇಪರ್ ಮಿಲ್ ಒಂದರಲ್ಲಿ ಎಂಬಿಎ ಯುವಕ ಕೆಲಸ ಮಾಡ್ತಿದ್ದಾನೆ. ಅದೇ ಮಿಲ್ ನ ಬೇರೆ ಬೇರೆ ಏಜೆಂಟರುಗಳಿಂದ ಹಣ ಪಡೆದಿದ್ದಾನೆ. ಒಟ್ಟು 8.51 ಲಕ್ಷ ವಂಚಿಸಿ ಪರಾರಿಯಾಗಿದ್ದಾನೆ. ನಂತ್ರ ಪೊಲೀಸರಿಗೆ ಕರೆ ಮಾಡಿ ಹಣವನ್ನು ಕಳ್ಳರು ದೋಚಿದ್ದಾರೆಂದು ಸುಳ್ಳು ಹೇಳಿದ್ದಾನೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ ಪೊಲೀಸರಿಗೆ ಈತನ ಮೇಲೆಯೇ ಅನುಮಾನ ಬಂದಿದೆ.
ವಿಚಾರಣೆ ಬಿಗಿಯಾಗ್ತಿದ್ದಂತೆ ವ್ಯಕ್ತಿ ಬಾಯ್ಬಿಟ್ಟಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಪ್ರೇಯಸಿಗೆ ಖಾಯಿಲೆಯಿದ್ದು, ಆಕೆ ಚಿಕಿತ್ಸೆಗೆ ಈತನ ಬಳಿ ಹಣವಿಲ್ಲ. ಹಾಗಾಗಿ ಈ ಕೆಲಸಕ್ಕೆ ಇಳಿದಿದ್ದಾನೆಂದು ಪೊಲೀಸರು ಹೇಳಿದ್ದಾರೆ.