alex Certify ರೈತರ ಆಕ್ರೋಶಕ್ಕೆ ಮಣಿದ ಫೇಸ್ ​ಬುಕ್: ಮತ್ತೆ ಸಕ್ರಿಯಗೊಂಡ ಕಿಸಾನ್​ ಏಕ್ತಾ ಮೋರ್ಚಾ ಖಾತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಆಕ್ರೋಶಕ್ಕೆ ಮಣಿದ ಫೇಸ್ ​ಬುಕ್: ಮತ್ತೆ ಸಕ್ರಿಯಗೊಂಡ ಕಿಸಾನ್​ ಏಕ್ತಾ ಮೋರ್ಚಾ ಖಾತೆ..!

ಕಿಸಾನ್​ ಏಕ್ತಾ ಮೋರ್ಚಾ ಖಾತೆಯನ್ನ ಅಳಿಸಿ ಹಾಕಿದ್ದ ಫೇಸ್​ಬುಕ್​ ಸಂಸ್ಥೆ ಭಾನುವಾರ ಸಂಜೆ ಮತ್ತೆ ಈ ಖಾತೆಯನ್ನ ಸಕ್ರಿಯಗೊಳಿಸಿದೆ. ಸೋಮವಾರ ರೈತರು ಸ್ವರಾಜ್​ ಭಾರತದ ಮುಖಂಡ ಯೋಗೇಂದ್ರ ಯಾದವ್​ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂಬ ಘೋಷಣೆ ಬೆನ್ನಲ್ಲೇ ಈ ಖಾತೆಯನ್ನ ಅಳಿಸಿ ಹಾಕಲಾಗಿತ್ತು.

ಕೃಷಿ ಮಸೂದೆ ವಿರೋಧಿಸಿ ರೈತರ ಹೋರಾಟವನ್ನ ಬೆಂಬಲಿಸಿ ಈ ಖಾತೆಯಲ್ಲಿ ಪೋಸ್ಟ್​ಗಳನ್ನ ಶೇರ್​ ಮಾಡಲಾಗುತ್ತಿತ್ತು. ಆದರೆ ಈ ಖಾತೆ ಸಮಾಜಕ್ಕೆ ವಿರೋಧವಾಗಿದೆ ಎಂದು ಆರೋಪಿಸಿ ಫೇಸ್​ಬುಕ್​ ಈ ಖಾತೆಯನ್ನ ಅಳಿಸಿಹಾಕಿತ್ತು.

ಇದರ ಸ್ಕ್ರೀನ್​ಶಾಟ್​ಗಳನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ ರೈತ ಬೆಂಬಲಿಗರು ಫೇಸ್​ಬುಕ್​ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸಾಕಷ್ಟು ವಿರೋಧ ಹಾಗೂ ಟೀಕೆಗಳನ್ನ ಎದುರಿಸಿದ ಬಳಿಕ ಫೇಸ್​ಬುಕ್​ ಸಂಸ್ಥೆ ಇದೀಗ ಈ ಖಾತೆಯನ್ನ ಮರು ಸ್ಥಾಪಿಸಿದೆ.

— Kisan Ekta Morcha (@Kisanektamorcha) December 20, 2020

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...