ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಲಾಕ್ ಡೌನ್ ಮಧ್ಯೆ ಅನೇಕರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವರು ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರಿಗೆ ಮದುವೆ ಮಂತ್ರ ಪಠಿಸಲು ಪಂಡಿತರು ಸಿಕ್ಕಿಲ್ಲ. ಹಾಗಾಗಿ ಗೂಗಲ್ ಆಶ್ರಯಿಸಿದವರೂ ಇದ್ದಾರೆ.
ಲಾಕ್ಡೌನ್ ಮಧ್ಯೆ ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯಲ್ಲಿ ಒಂದು ಅನನ್ಯ ವಿವಾಹ ನಡೆದಿದೆ. ಇದರಲ್ಲಿ ವಧು-ವರರ ಪಕ್ಷಕ್ಕೆ ಯಾವುದೇ ಪಂಡಿತರು ಸಿಗಲಿಲ್ಲ. ನಂತರ ಎಸ್ಐ ಅಂಜಲಿ ಅಗ್ನಿಹೋತ್ರಿ ಜೋಡಿಗೆ ಮದುವೆ ಮಾಡಿಸಿದ್ದಾರೆ. ಮದುವೆಯಾಗುವ ವೇಳೆ ಗೂಗಲ್ ನಲ್ಲಿರುವ ಮಂತ್ರವನ್ನು ಅಂಜಲಿ ಅಗ್ನಿಹೋತ್ರಿ ಪಠಿಸಿದ್ರು. ದೀಪ ಬೆಳಗಿದ್ರು. ದಂಪತಿ ಸಪ್ತಪದಿ ತುಳಿದ್ರು.
ಅಂಜಲಿ ರೌಂಡ್ಸ್ ಗೆ ಹೊರಟಿದ್ದರಂತೆ. ಈ ವೇಳೆ ದೇವಸ್ಥಾನದಲ್ಲಿ ವಧು-ವರ ಸೇರಿ 8 ಮಂದಿ ದೇವಸ್ಥಾನದಲ್ಲಿದ್ದರಂತೆ. ಆದ್ರೆ ಪಂಡಿತರಿಲ್ಲದೆ ಮದುವೆ ಕಾರ್ಯ ನಿಂತಿತ್ತಂತೆ. ಈ ವೇಳೆ ಅಂಜಲಿ ನೋಡಿದ ಹುಡುಗಿ ಕಡೆಯವರು ನೀವು ಮದುವೆ ಮಾಡಿಸಿದ್ರೂ ನಮಗೆ ಅಭ್ಯಂತರವಿಲ್ಲವೆಂದ್ರಂತೆ. ಬಂದ ಮಂತ್ರವನ್ನು ಪಠಿಸಿದ ಅಂಜಲಿ ನಂತ್ರ ಗೂಗಲ್ ನೋಡಿ ಮಂತ್ರ ಓದಿ ಮದುವೆ ಮಾಡಿಸಿದರಂತೆ.