ಕೊರೋನಾ ಕಾರಣದಿಂದ ಜಾರಿಯಲ್ಲಿದ್ದ ಲಾಕ್ಡೌನ್ ಸಡಿಲಿಕೆಯಾದರೂ ಸಹ ಉದ್ಯೋಗ ಕೊರತೆ ಹಾಗೂ ವಿವಿಧ ಕಾರಣದಿಂದ ಕೂಲಿಕಾರ್ಮಿಕರು ನೆಲೆನಿಲ್ಲಲು ಈಗಲೂ ಪರದಾಡುತ್ತಿದ್ದಾರೆ, ಹಸಿವಿನಿಂದ ಬಳಲುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಊಟ – ಉಪಹಾರವನ್ನು ತಲುಪಿಸಲು ಪ್ರಯತ್ನಿಸುತ್ತಿದೆ. ಈಗ ದೆಹಲಿ ಗುರುದ್ವಾರ ಸಮಿತಿಯು ಲಂಗರ್ ಅನ್ ವೀಲ್ ಎಂಬ ಚಟುವಟಿಕೆ ಪ್ರಾರಂಭಿಸಿದೆ. ರೈಲು ನಿಲ್ದಾಣ, ರಾತ್ರಿ ಆಶ್ರಯದಾಣಗಳು, ಬಸ್ ನಿಲ್ದಾಣ, ಪಾದಚಾರಿ ಮಾರ್ಗದಲ್ಲಿ ವಾಸಿಸುವವರಿಗೆ ಪ್ರತಿನಿತ್ಯ ಊಟ ನೀಡಲು ಮುಂದಾಗಿದೆ.
ಪ್ರತಿದಿನ ಆಹಾರದ ವ್ಯಾನ್ ಗಳು ದೆಹಲಿಯಾದ್ಯಂತ ವಿವಿಧ ಸ್ಥಳಗಳಿಗೆ ತೆರಳಿ ಆಹಾರವನ್ನು ಪೂರೈಸುತ್ತಿವೆ ಎಂದು ಸಮಿತಿ ಅಧ್ಯಕ್ಷರು ಹೇಳಿದ್ದಾರೆ.
ಆಹಾರದ ಅಗತ್ಯತೆ ತಿಳಿದುಕೊಳ್ಳಲು ಸರ್ಕಾರಿ ಅಧಿಕಾರಿಗಳು ಮತ್ತು ಬಡಾವಣೆ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.