alex Certify ಅನ್ನದಾತರ ಹೋರಾಟಕ್ಕೆ ಬೆಂಬಲ ಕೊಟ್ಟ ಡಾಬಾ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ನದಾತರ ಹೋರಾಟಕ್ಕೆ ಬೆಂಬಲ ಕೊಟ್ಟ ಡಾಬಾ ಸಿಬ್ಬಂದಿ

ಕೃಷಿ ಕ್ಷೇತ್ರದ ಸುಧಾರಣೆಗೆಂದು ಕೇಂದ್ರ ಸರ್ಕಾರ ತಂದಿರುವ ನೂತನ ಕಾಯಿದೆಗಳನ್ನು ವಿರೋಧಿಸುತ್ತಾ ’ದಿಲ್ಲಿ ಚಲೋ’ ಮೂಡ್‌ನಲ್ಲಿರುವ ಪ್ರತಿಭಟನಾಕಾರರಿಗೆ ಪೊಲೀಸರಿಂದ ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿ ಏಟುಗಳು ಬಿದ್ದಿವೆ.

ಇದೇ ವೇಳೆ, ಪ್ರತಿಭಟನೆ ನಿರತ ಮಂದಿಗೆ ಹೆದ್ದಾರಿಯಲ್ಲಿರುವ ಡಾಬಾ ಒಂದು ನೆರವಿಗೆ ಬಂದು ಊಟದ ವ್ಯವಸ್ಥೆ ಮಾಡಿದೆ.

ಹರಿಯಾಣಾದ ಮುರ್ತಾಲ್‌ನಲ್ಲಿರುವ ಅಮ್ರಿಕ್ ಸುಖ್‌ದೇವ್‌ ಡಾಬಾ ಪ್ರತಿಭಟನಾನಿರತ ರೈತರಿಗೆ ತನ್ನ ಬಾಗಿಲುಗಳನ್ನು ತೆರೆದಿದ್ದು, ಮೂರು ದಿನಗಳ ಮಟ್ಟಿಗೆ ಲಂಗರ್‌ ಸೇವೆ ಆರಂಭಿಸಿದೆ. ಡಾಬಾ ಸಿಬ್ಬಂದಿಯ ಈ ಹೃದಯಸ್ಪರ್ಶಿ ನಡೆಯು ಅನೇಕ ನೆಟ್ಟಿಗರ ಮನಗೆದ್ದಿದೆ.

ಡಾಬಾದಲ್ಲಿ ರೈತರು ಆಹಾರ ಸೇವಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...