alex Certify ಕೊರೊನಾ ಸೋಂಕು ಪೀಡಿತರ ಆರ್ಡರ್‌ ನೋಡಿ ಸುಸ್ತಾದ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕು ಪೀಡಿತರ ಆರ್ಡರ್‌ ನೋಡಿ ಸುಸ್ತಾದ ಅಧಿಕಾರಿ

ಆಸ್ಪತ್ರೆಯಲ್ಲಿ ಶಾಖಾಹಾರಿ ಅಡುಗೆ ತಿಂದು ಬೇಸತ್ತ ಕರೋನಾ ವೈರಸ್ ಸೋಂಕಿತ‌ ನಾಲ್ವರು ರೋಗಿಗಳು ಫುಡ್ ಡಿಲೆವರಿ ಆಪ್ ಮೂಲಕ ಮಾಂಸಾಹಾರವನ್ನು ಆರ್ಡರ್ ಮಾಡಿದ ಘಟನೆ ತಮಿಳುನಾಡಿನ ಸಲೇಮ್ ನ ಮೋಹನ ಕುಮಾರಮಂಗಲಂ‌ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ನಡೆದಿದೆ.‌

ಬಿರ್ಯಾನಿ ಹಾಗೂ ತಂದೂರಿ ಚಿಕನ್ ಫುಡ್ ಆರ್ಡರ್‌ ಪಡೆದ ಡಿಲೆವರಿ ಬಾಯ್ ಆ್ಯಪ್ ನಲ್ಲಿ ತೋರಿಸಿದ‌ ಮಾರ್ಗದರ್ಶಿ ಆಧರಿಸಿ ಸ್ಥಳಕ್ಕೆ ಹೊರಟಿದ್ದಾನೆ. ಆಸ್ಪತ್ರೆಯ ಎದುರು ಪ್ರವೇಶಿಸುವ ಮೊದಲು ಅಲ್ಲಿನ ಭದ್ರತಾ ಸಿಬ್ಬಂದಿ ಆತನನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಆತ ಹೇಳಿದ ವಿಷಯ ಕೇಳಿ ಅವಾಕ್ಕಾಗಿದ್ದು, ತಕ್ಷಣ‌ ಮೆಡಿಕಲ್ ಕಾಲೇಜ್ ಡೀನ್ ಡಾ.ಬಾಲಾಜಿನಾಥನ್ ಹಾಗೂ ಇತರ ವೈದ್ಯರಿಗೆ ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

“ನಾವು ವಿಚಾರಣೆ ನಡೆಸಿ ತಡೆಯದೇ ಇದ್ದರೆ, ಡಿಲೆವರಿ ಬಾಯ್ ಆ್ಯಪ್ ಮಾರ್ಗದರ್ಶನ ಆಧರಿಸಿ ನೇರವಾಗಿ ಕರೋನಾ ವಾರ್ಡ್ ಪ್ರವೇಶಿಸುತ್ತಿದ್ದ”ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕರೋನಾ ರೋಗಿಗಳು ಆಹಾರ ಆರ್ಡರ್ ಮಾಡಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಡಿಲೆವರಿ ಬಾಯ್ ಹೇಳಿದ್ದಾನೆ. ಆಸ್ಪತ್ರೆ ಅಧಿಕಾರಿಗಳು ಆತನನ್ನು ವಾಪಸ್ ಕಳಿಸಿದ್ದಾರೆ. “ಆಸ್ಪತ್ರೆಯಿಂದ ಬಿಡುಗಡೆ ಹೊಂದುವವರೆಗೆ ಮಾಂಸಾಹಾರ ತಿನ್ನುವಂತಿಲ್ಲ. ಪ್ರೋಟೀನ್ ಯುಕ್ತ ಸಸ್ಯಾಹಾರಿ ಊಟ ಮಾಡಬೇಕು” ಎಂದು ವೈದ್ಯರು ಕರೋನಾ ರೋಗಿಗಳಿಗೆ ಎಚ್ಚರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...