ದೆಹಲಿ ಆಜಾದ್ಪುರ ಮಂಡಿಯಲ್ಲಿ 11 ತರಕಾರಿ ವ್ಯಾಪಾರಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದ್ರ ನಂತ್ರ ಅನೇಕ ಅಂಗಡಿಗಳ ಬಾಗಿಲು ಹಾಕಲಾಗಿದೆ. ವ್ಯಾಪಾರಿಗಳ ಸಂಪರ್ಕಕ್ಕೆ ಬಂದ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಆಜಾದ್ಪುರ ಮಂಡಿಯಲ್ಲಿ ಕೆಲಸ ಮಾಡ್ತಿದ್ದ ವ್ಯಾಪಾರಿಯೊಬ್ಬ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದ. ಇದಾದ ನಂತ್ರ ಆತನ ಸಂಪರ್ಕಕ್ಕೆ ಬಂದ ವ್ಯಾಪಾರಿಗಳ ಪರೀಕ್ಷೆ ನಡೆಸಲಾಗಿತ್ತು.
ಕೊರೊನಾ ಸೋಂಕು ತರಕಾರಿ ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3314 ಕ್ಕೆ ತಲುಪಿದ್ದು, ಅದರಲ್ಲಿ 54 ಜನರು ಸಾವನ್ನಪ್ಪಿದ್ದರೆ, 1078 ಜನರು ಗುಣಮುಖರಾಗಿದ್ದಾರೆ.
ದೆಹಲಿಯ ಸಿಆರ್ಪಿಎಫ್ ಸೈನಿಕ ಮೊಹಮ್ಮದ್ ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ಇದಾದ ನಂತ್ರ ಸಿಆರ್ಪಿಎಫ್ ಬೆಟಾಲಿಯನ್ ಗೆ ಬೀಗ ಜಡಿಯಲಾಗಿದೆ. ಅವ್ರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ.