alex Certify ಪರೇಡ್​ನಲ್ಲಿ ಭಾಗಿಯಾಗಲು ತೆರಳಿದ್ದ ಯೋಧ ರಸ್ತೆ ಅಪಘಾತದಲ್ಲಿ ಹುತಾತ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರೇಡ್​ನಲ್ಲಿ ಭಾಗಿಯಾಗಲು ತೆರಳಿದ್ದ ಯೋಧ ರಸ್ತೆ ಅಪಘಾತದಲ್ಲಿ ಹುತಾತ್ಮ

ಸಿಐಎಸ್​ಎಫ್​ನ 59 ವರ್ಷದ ಜವಾನ ನಾಗಪುರದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಗಪುರದ ಸೋನೆಗಾಂವ್​​ ಏರಿಯಾದಲ್ಲಿ ಈ ದುರಂತ ಸಂಭವಿಸಿದೆ.

ಹುತಾತ್ಮ ಯೋಧನನ್ನ ಜಿ.ಡಿ. ರಘುವಂಶಿ ಎಂದು ಗುರುತಿಸಲಾಗಿದೆ. ಇವರು ಏರ್​ಪೋರ್ಟ್ ಕಾಲೋನಿಯ ನಿವಾಸಿಯಾಗಿದ್ದರು. ಸಿಐಎಸ್​ಎಫ್​​ನಲ್ಲಿ ಇವರು ಹವಾಲ್ದಾರ್​ ಹಾಗೂ ಯೋಗ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪರೇಡ್​ನಲ್ಲಿ ಭಾಗಿಯಾಗಬೇಕು ಅಂತಾ ರಘುವಂಶಿ ಮುಂಜಾನೆಯೇ ಮನೆಯಿಂದ ಹೊರಟಿದ್ರು ಎನ್ನಲಾಗಿದೆ.

ಮಗುಚಿದ ಟ್ರಕ್: ರೊಚ್ಚಿಗೆದ್ದ ಜೇನ್ನೊಣಗಳ ದಾಳಿ

ಮನೆಯಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಇವರ ಬೈಕ್​​ ಹಾಲು ಮಾರಾಟಗಾರನ ದ್ವಿಚಕ್ರ ವಾಹನಕ್ಕೆ ಹೋಗಿ ಬಡಿದಿದೆ. ತೀವ್ರ ಗಾಯದಿಂದ ಬಳಲುತ್ತಿದ್ದ ರಘುವಂಶಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವರ ಮಧ್ಯಾಹ್ನ 3 ಗಂಟೆಗೆ ಅಸು ನೀಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...