alex Certify ಪ್ರಾಮಾಣಿಕತೆ ಮೆರೆದ ಚಾಲಕ: ನಡುರಾತ್ರಿಯಲ್ಲೇ ಪ್ರಯಾಣಿಕರ ಲಗೇಜ್‌ ಮರಳಿಸಿದ ಶರವಣ‌ ಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಮಾಣಿಕತೆ ಮೆರೆದ ಚಾಲಕ: ನಡುರಾತ್ರಿಯಲ್ಲೇ ಪ್ರಯಾಣಿಕರ ಲಗೇಜ್‌ ಮರಳಿಸಿದ ಶರವಣ‌ ಕುಮಾರ್

ಈಗಂತೂ ಬಹುತೇಕ ಮಂದಿ ಹೊರಗಡೆ ಸುತ್ತಾಡೋದು ಅಂದರೆ ಕ್ಯಾಬ್​ ಬಳಕೆ ಮಾಡೋದೇ ಜಾಸ್ತಿ. ಇದಕ್ಕೆಂದೇ ಓಲಾ, ಊಬರ್​ನಂತಹ ಕ್ಯಾಬ್​ಗಳು ಇವೆ. ಇಂತಹ ಕ್ಯಾಬ್​ಗಳು ಅನೇಕ ಬಾರಿ ಜನರಿಗೆ ಒಳ್ಳೆಯ ಸರ್ವೀಸ್​ ನೀಡಿದ್ರೆ ಇನ್ನು ಕೆಲವು ಬಾರಿ ಕೆಟ್ಟ ಅನುಭವ ಮಾಡಿರೋದು ಇದೆ.

ಇದೀಗ ಇಂತಹದ್ದೇ ಒಂದು ವಿಚಾರದಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ಕ್ಯಾಬ್​ ಡ್ರೈವರ್​​ ಒಬ್ಬರು ಟ್ರೆಂಡಿಂಗ್​ನಲ್ಲಿ ಇದ್ದಾರೆ.  ಈ ಕ್ಯಾಬ್​ ಡ್ರೈವರ್​ ಮಾಡಿದ ಕೆಲಸ ನೋಡಿದ ನೆಟ್ಟಿಗರು ಮೆಚ್ಚುಗೆಯ ಸುರಿಮಳೆ ಸುರಿಸುತ್ತಿದ್ದಾರೆ.

ಶರವಣ ಕುಮಾರ್​ ಹೆಸರಿನ ಕ್ಯಾಬ್​ ಡ್ರೈವರ್​ ಊಬರ್​ ಸರ್ವೀಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋಲ್ಕತ್ತಾ ಏರ್​ಪೋರ್ಟ್​ನಿಂದ ಅವರು ಪ್ರಯಾಣಿಕರನ್ನ ಪಿಕ್​ ಮಾಡಿಕೊಂಡು ಹೊರಟಿದ್ದರು. ಈ ಪ್ರಯಾಣಿಕರು ಕ್ಯಾಬ್​ನಲ್ಲೇ ಕೆಲ ಅಮೂಲ್ಯ ವಸ್ತುಗಳನ್ನ ಬಿಟ್ಟು ತೆರಳಿದ್ದರು.

ಪ್ರಾಮಾಣಿಕತೆ ಮೆರೆದ ಶರವಣ್​ ಕುಮಾರ್​ ಈ ಎಲ್ಲಾ ಬೆಲೆಬಾಳುವ ಸಾಮಗ್ರಿಗಳನ್ನ ಪ್ರಯಾಣಿಕನಿಗೆ ಹಿಂದಿರುಗಿಸಿದ್ದಾರೆ. ಪತ್ರಕರ್ತ ಅಭಿಜಿತ್​ ಮಜೂಂದಾರ್​ ಟ್ವಿಟರ್​ನಲ್ಲಿ ಶರವಣ್​ ಕುಮಾರ್​ರ ಈ ಕಾರ್ಯದ ಬಗ್ಗೆ ವಿಶ್ಲೇಷಣೆ ಮಾಡುತ್ತಾ, ನಾನು ಕ್ಯಾಬ್​​ನಲ್ಲಿ ನನ್ನ ಬ್ಯಾಗ್​ನ್ನು ಮರೆತಿದ್ದೆ. ಇದರಲ್ಲಿ ನನ್ನ ಮ್ಯಾಕ್​ಬುಕ್​​​, ಹಣ, ಕೀಲಿ ಕೈ ಹಾಗೂ ಕೆಲ ಪುಸ್ತಕಗಳು ಇದ್ದವು.  ಮಧ್ಯರಾತ್ರಿ ವೇಳೆಗೆ ಈ ಚಾಲಕ ನನ್ನ ಮನೆಗೆ ಬಂದರು ಹಾಗೂ ಎಲ್ಲಾ ಸಾಮಗ್ರಿಗಳನ್ನ ಸುರಕ್ಷಿತವಾಗಿ ತಲುಪಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಟ್ವಿಟರ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...