alex Certify ‘ಬಜೆಟ್’ ಮಂಡನೆ ವೇಳೆ ನೀರಿನ ಬದಲು ಸ್ಯಾನಿಟೈಸರ್​ ಕುಡಿದ ಅಧಿಕಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಜೆಟ್’ ಮಂಡನೆ ವೇಳೆ ನೀರಿನ ಬದಲು ಸ್ಯಾನಿಟೈಸರ್​ ಕುಡಿದ ಅಧಿಕಾರಿ…!

ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ನ ಉಪ ಕಮಿಷನರ್​​ ರಮೇಶ್​ ಪವಾರ್​​, ಕುಡಿಯುವ ನೀರು ಎಂದುಕೊಂಡು ತಪ್ಪಾಗಿ ಸ್ಯಾನಿಟೈಸರ್​ ಕುಡಿದಿದ್ದಾರೆ. ಸಿವಿಕ್​​ ಬಾಡಿಯ ಶಿಕ್ಷಣ ಬಜೆಟ್​ ಮಂಡಿಸುವ ವೇಳೆ ಈ ಘಟನೆ ಸಂಭವಿಸಿದೆ.

ಕುಡಿಯುವ ನೀರಿನ ಬಾಟಲಿಯ ಪಕ್ಕದಲ್ಲೇ ಸ್ಯಾನಿಟೈಸರ್​ ಬಾಟಲಿಯನ್ನೂ ಇಡಲಾಗಿತ್ತು. ಹೀಗಾಗಿ ರಮೇಶ್​ ಪವಾರ್​ ಈ ಯಡವಟ್ಟನ್ನ ಮಾಡಿಕೊಂಡಿದ್ದಾರೆ.

ಬಜೆಟ್​ ಮಂಡಿಸೋದಕ್ಕೂ ಮುನ್ನ ರಮೇಶ್​ ನೀರನ್ನ ಕುಡಿಯೋಕೆ ನಿರ್ಧರಿಸಿದ್ದಾರೆ. ಹೀಗಾಗಿ ನೀರಿನ ಬಾಟಲಿಯನ್ನ ಎತ್ತಿಕೊಳ್ಳುವ ಜಾಗದಲ್ಲಿ ತಪ್ಪಾಗಿ ಸ್ಯಾನಿಟೈಸರ್​ ಬಾಟಲಿ ಎತ್ತಿದ್ದಾರೆ. ಸ್ಯಾನಿಟೈಸರ್​ ಎಂದು ಗೊತ್ತಾಗುತ್ತಿದ್ದಂತೆಯೇ ಅದನ್ನ ಹೊರಕ್ಕುಗುಳಿದ್ದಾರೆ.

ಈ ಘಟನೆ ಬಳಿಕ ಸಣ್ಣ ವಿರಾಮ ತೆಗೆದುಕೊಂಡ ರಮೇಶ್​ ಬಳಿಕ ತಮ್ಮ ಸ್ಥಾನಕ್ಕೆ ವಾಪಸ್ಸಾಗಿದ್ದಾರೆ. ಹಾಗೂ ಬಜೆಟ್​ ಮಂಡನೆ ಮುಂದುವರಿಸಿದ್ದಾರೆ. ರಮೇಶ್ ಆರೋಗ್ಯದಲ್ಲಿ ಯಾವುದೇ ಏರುಪೇರು ಸಂಭವಿಸಿಲ್ಲ.

— ANI (@ANI) February 3, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...