alex Certify ಒಬ್ಬಳೊಂದಿಗೇ ಅಕ್ರಮ ಸಂಬಂಧಕ್ಕಾಗಿ ಜಗಳ: ಬಿಜೆಪಿ ಮುಖಂಡನ ಪುತ್ರನ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬಳೊಂದಿಗೇ ಅಕ್ರಮ ಸಂಬಂಧಕ್ಕಾಗಿ ಜಗಳ: ಬಿಜೆಪಿ ಮುಖಂಡನ ಪುತ್ರನ ಹತ್ಯೆ

ಲಖ್ನೋ: ಉತ್ತರಪ್ರದೇಶದ ಗುಲಾರಿಹಾ ಕ್ಷೇತ್ರದ ಸೋಲಬರಸ ಅರಣ್ಯ ಪ್ರದೇಶದಲ್ಲಿ ಬಿಜೆಪಿ ಮುಖಂಡನ ಪುತ್ರನನ್ನು ಕೊಲೆ ಮಾಡಲಾಗಿದೆ.

ಮಹಿಳೆಯೊಂದಿಗೆ ಅಕ್ರಮ ಸಂಬಂಧದ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬಿಜೆಪಿ ಸ್ಥಳೀಯ ಘಟಕದ ಮುಖ್ಯಸ್ಥ ಹೀರಾಲಾಲ್ ಅವರ ಪುತ್ರ ರಾಣಾ ಪ್ರತಾಪ್ ಮೃತದೇಹ ಅಕ್ಟೋಬರ್ 16 ರಂದು ಅರಣ್ಯಪ್ರದೇಶದಲ್ಲಿ ಕಂಡುಬಂದಿದೆ.

ಮೃತದೇಹದ ಮೇಲೆ ಬೈಕ್ ಬೀಳಿಸಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎನ್ನುವಂತೆ ಬಿಂಬಿಸಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ರಾಮಕೇಶ್ ಯಾದವ್, ರಾಕೇಶ್ ಯಾದವ್ ಮತ್ತು ಪನ್ನೇಲಾಲ್ ಬಂಧಿತ ಆರೋಪಗಳಾಗಿದ್ದಾರೆ. ರಾಮಕೇಶ್ ಯಾದವ್ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ರಾಣಾಪ್ರತಾಪ್ ಕೂಡ ಸಂಬಂಧ ಬೆಳೆಸಿದ್ದ. ಈ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿತ್ತು. ನಂತರ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...