alex Certify ಜನರ ಹೃದಯದಲ್ಲಿ ನಾವಿದ್ದೇವೆ ಎಂದ ತೇಜಸ್ವಿ ಯಾದವ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನರ ಹೃದಯದಲ್ಲಿ ನಾವಿದ್ದೇವೆ ಎಂದ ತೇಜಸ್ವಿ ಯಾದವ್​

ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ನಿತೀಶ್​ ಕುಮಾರ್​ರನ್ನ ಕೆಳಗಿಳಿಸುವಲ್ಲಿ ವಿಫಲವಾದರೂ ಸಹ ಬಿಹಾರದಲ್ಲಿ ಆರ್​ಜೆಡಿಯನ್ನ ಅತಿದೊಡ್ಡ ಪಕ್ಷವನ್ನಾಗಿ ಕೊಂಡೊಯ್ಯುವಲ್ಲಿ ಯಶಸ್ವಿಯಾದ ತೇಜಸ್ವಿ ಯಾದವ್​, ಜನಾದೇಶ ನನ್ನ ಪರವಾಗಿದೆ ಅಂತಾ ಹೇಳಿದ್ದಾರೆ.

ಪ್ರಧಾನಿ ಮೋದಿ ಹಾಗೂ ನಿತೀಶ್​ ಕುಮಾರ್​​ ಹಣ ಬಲ, ತೋಳ್ಬಲವನ್ನ ಪ್ರಯೋಗಿಸಿದ್ರೂ ಸಹ ಈ 31 ವರ್ಷದ ತೇಜಸ್ವಿಯನ್ನ ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಆರ್​ಜೆಡಿ ಏಕೈಕ ದೊಡ್ಡ ಪಕ್ಷಬವಾಗಿ ಹೊರಹೊಮ್ಮೋದನ್ನ ತಪ್ಪಿಸುವಲ್ಲಿ ಅವರು ವಿಫಲರಾಗಿದ್ದಾರೆ. ಇಂದು ನಿತೀಶ್​ ಸಿಎಂ ಸ್ಥಾನದಲ್ಲಿ ಕುಳಿತಿರಬಹುದು. ಆದರೆ ಜನಾದೇಶ ನನ್ನ ಪರವಾಗಿದೆ ಅನ್ನೋದು ಅಷ್ಟೇ ಸತ್ಯ ಅಂತಾ ಗುಡುಗಿದ್ದಾರೆ.

ಬಿಹಾರ ಚುನಾವಣೆಯಲ್ಲಿ ನಿತೀಶ್​ ಕುಮಾರ್​ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದು ಜನರು ಬದಲಾವಣೆಗೆ ಆದೇಶ ನೀಡಿದ್ದಾರೆ ಅನ್ನೋದನ್ನ ತೋರಿಸುತ್ತೆ. ನಿತೀಶ್​ ಸಿಎಂ ಸ್ಥಾನದಲ್ಲಿ ಇದ್ದಾರೆ. ಆದರೆ ನಾವು ಜನರ ಹೃದಯದಲ್ಲಿ ಇದ್ದೇವೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...