alex Certify ಅಚ್ಚರಿಯಾದರೂ ಇದು ನಿಜ..! ಕರೋನಾ ಕಾರಣಕ್ಕೆ ಸಿಕ್ಕಿದೆ ಕಳೆದುಕೊಂಡ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದರೂ ಇದು ನಿಜ..! ಕರೋನಾ ಕಾರಣಕ್ಕೆ ಸಿಕ್ಕಿದೆ ಕಳೆದುಕೊಂಡ ಹಣ

ಕಿಕ್ಕಿರಿದ ಬಸ್ ಪ್ರಯಾಣದ ಜನಸಂದಣಿ ಪ್ರದೇಶದಲ್ಲಿ ಜನರು ದುಡ್ಡು ಕಳೆದುಕೊಳ್ಳುವುದು ಸಾಮಾನ್ಯ ಸಂಗತಿ. ಆಗಿಂದಾಗೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ.

ಲಾಕ್ ಡೌನ್ ವೇಳೆ ಬಿಹಾರದಲ್ಲಿ ಇತ್ತೀಚೆಗೆ ಆಟೋ ಚಾಲಕರಚಾಲಕರೊಬ್ಬರು ಖರೀದಿಗೆಂದು ತೆಗೆದುಕೊಂಡು ಹೋಗಿದ್ದ 20,500 ರೂಪಾಯಿ ಕಳೆದುಕೊಂಡಿದ್ದು, ಬಳಿಕ ಆಕಸ್ಮಿಕವಾಗಿ ಆ ಹಣ ಅವರ ಕೈ ಸೇರಿದೆ.

ಆಟೋ ಚಾಲಕ ಗಜೇಂದ್ರ, ಮಾರುಕಟ್ಟೆಗೆ ಹೋಗುತ್ತಿದ್ದಾಗ ಹಣ ಬೀಳಿಸಿಕೊಂಡಿದ್ದರು. ನಂತರ ಹಣ ನಾಪತ್ತೆಯಾಗಿದ್ದು ಗಮನಕ್ಕೆ ಬಂದಿದೆ. ತಾವು ಬಂದ ದಾರಿಯಲ್ಲೇ ಹುಡುಕುತ್ತಾ ಸಾಗಿದಾಗ ಸಣ್ಣ ಸುಳಿವು ಸಿಕ್ಕಿಲ್ಲ.

ಆದರೆ ನೆರೆಹೊರೆಯವರು ಜಾಲತಾಣದಲ್ಲಿನ ಕೆಲವು ಫೋಟೊಗಳನ್ನು ಗಜೇಂದ್ರ ಅವರ ಗಮನಕ್ಕೆ ತಂದಿದ್ದಾರೆ. ಕರೊನಾ ಸೋಂಕಿತರು ಹಣ ಬೀಳಿಸಿದ್ದಾರೆಂದು ಜನ ದೂರು ಕೊಟ್ಟ ಮೇಲೆ ಪೊಲೀಸರು ಆ ಹಣ ವಶಕ್ಕೆ ಪಡೆದಿದ್ದರಂತೆ.

ಕರೊನಾ ಕಾರಣಕ್ಕೆ ಜನರೂ ಸಹ ಹಣವನ್ನು ಮುಟ್ಟದೇ ಪೊಲೀಸರ ಗಮನಕ್ಕೆ ತಂದಿದ್ದರು.

ಆ ಆಟೋ ಚಾಲಕ ಕೆಲವು ಸಾಕ್ಷಿಗಳೊಂದಿಗೆ ಠಾಣೆಗೆ ತೆರಳಿ ಹಣವನ್ನು ವಾಪಸು ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...