alex Certify ʼತೆರಿಗೆʼ ಬಾಕಿ ಉಳಿಸಿಕೊಂಡವರ ಮನೆ ಮುಂದೆ ಸಾರಲಾಗುತ್ತೆ ಡಂಗೂರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼತೆರಿಗೆʼ ಬಾಕಿ ಉಳಿಸಿಕೊಂಡವರ ಮನೆ ಮುಂದೆ ಸಾರಲಾಗುತ್ತೆ ಡಂಗೂರ…!

ತೆರಿಗೆ ಪಾವತಿ ಬಾಕಿ ಉಳಿಸಿಕೊಂಡ ದೊಡ್ಡ ದೊಡ್ಡ ಆಸ್ತಿದಾರರಿಂದ ತೆರಿಗೆ ಪಾವತಿ ಮಾಡಿಸಿಕೊಳ್ಳಲು ಭೋಪಾಲ್​ನ ಮುನ್ಸಿಪಲ್​ ಕಾರ್ಪೋರೇಷನ್​ ವಿನೂತನ ಅಭಿಯಾನವೊಂದನ್ನ ನಡೆಸೋಕೆ ಮುಂದಾಗಿದೆ.

ಈ ಕ್ಯಾಂಪೇನ್​ನ ಅಡಿಯಲ್ಲಿ ಪೌರ ಕಾರ್ಮಿಕರು ತೆರಿಗೆ ಪಾವತಿ ಬಾಕಿ ಉಳಿಸಿಕೊಂಡವರ ಮನೆಯ ಎದುರು ಡಂಗೂರ ಸಾರಲಿದ್ದಾರೆ.

ನಗರಸಭೆಯು ಕಾಲ ಕಾಲಕ್ಕೆ ತೆರಿಗೆ ಸಂಗ್ರಹಕ್ಕಾಗಿ ಅಭಿಯಾನಗಳನ್ನ ನಡೆಸುತ್ತಿತ್ತು. ಆದರೆ ಈ ಯಾವುದೇ ಅಭಿಯಾನಕ್ಕೆ ಸಾರ್ವಜನಿಕರು ಸರಿಯಾದ ಬೆಲೆ ನೀಡದ ಕಾರಣ, ಈ ಬಾರಿ ಈ ಹೊಸ ಅಭಿಯಾನವನ್ನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ರೀತಿ ಮನೆ ಮುಂದೆ ಡಂಗೂರ ಸಾರಿದರೆ ಸಾಮಾಜಿಕವಾಗಿ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಭಯಕ್ಕಾದರೂ ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಬಹುದು ಎಂಬ ನಿರೀಕ್ಷೆಯಿಂದ ಈ ಅಭಿಯಾನವನ್ನ ಮಾಡಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...