alex Certify ಕಲಿಯುಗ ಅಂತ್ಯವಾಯ್ತು ಅಂತಾ ಹೆತ್ತ ಮಕ್ಕಳನ್ನೇ ಕೊಂದ ಪಾಪಿ ತಾಯಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಿಯುಗ ಅಂತ್ಯವಾಯ್ತು ಅಂತಾ ಹೆತ್ತ ಮಕ್ಕಳನ್ನೇ ಕೊಂದ ಪಾಪಿ ತಾಯಿ…!

ಹೆತ್ತ ತಾಯಿಯೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನ ಕೊಲೆ ಮಾಡಿದ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮಂದನಪಲ್ಲೆ ಪಟ್ಟಣದಲ್ಲಿ ನಡೆದಿದೆ. 27 ವರ್ಷದ ಅಲೇಖ್ಯಾ ಹಾಗೂ 22 ವರ್ಷ ಸಾಯಿ ದಿವ್ಯಾ ಎಂಬವರನ್ನ ಪದ್ಮಜಾ ಎಂಬಾಕೆ ಡಂಬೆಲ್ಸ್​ ಬಳಸಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ಇನ್ನು ಈಕೆ ಮಕ್ಕಳನ್ನ ಕೊಲೆ ಮಾಡೋಕೆ ನೀಡಿದ ಕಾರಣ ಕೇಳಿ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ರವಿವಾರ ರಾತ್ರಿಗೆ ಕಲಿಯುಗ ಕೊನೆಯಾಗಲಿದ್ದು ಸೋಮವಾರದಿಂದ ಸತ್ಯಯುಗ ಶುರುವಾಗಲಿದೆ. ಹೀಗಾಗಿ ಸೋಮವಾರ ನನ್ನ ಮಕ್ಕಳು ಮತ್ತೊಮ್ಮೆ ಹುಟ್ಟಿ ಬರ್ತಾರೆ ಎಂದು ಕೊಲೆ ಮಾಡಿದೆ ಎಂದು ತಾಯಿ ಪದ್ಮಜಾ ಹೇಳಿದ್ದಾರೆ. ಆರೋಪಿ ಪದ್ಮಜಾರ ಪತಿ ಪುರುಷೋತ್ತಮ ನಾಯ್ಡು ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡ್ತಿದ್ದಾರೆ.

ಅಲೇಖ್ಯಾ ಈ ದಂಪತಿಯ ಹಿರಿಯ ಪುತ್ರಿಯಾಗಿದ್ದಳು. ಭೋಪಾಲ್​ನಲ್ಲಿ ಈಕೆ ಉನ್ನತ ಶಿಕ್ಷಣ ಪೂರೈಸಿದ್ದಳು, ಇನ್ನು ಕಿರಿಯ ಮಗಳು ಸಾಯಿ ದಿವ್ಯಾ ಬಿಬಿರ ಪದವಿಧರೆ. ಮುಂಬೈನ ಎ.ಆರ್.​ ರೆಹಮಾನ್​​ ಸಂಗೀತ ಶಾಲೆಯ ವಿದ್ಯಾರ್ಥಿನಿ ಕೂಡ ಹೌದು. ಲಾಕ್​ ಡೌನ್​ ಸಂದರ್ಭದಿಂದ ಇವರಿಬ್ಬರು ಮನೆಯಲ್ಲೇ ಇದ್ದರು.

ಕೋವಿಡ್​ 19 ಲಾಕ್​ಡೌನ್​​ನಿಂದ ಅದರಲ್ಲೂ ಪ್ರಮುಖವಾಗಿ ರವಿವಾರ ರಾತ್ರಿ ದಂಪತಿ ವಿಚಿತ್ರವಾಗಿ ವರ್ತಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕೊಲೆಯಾದ ದಿನವೂ ಕೂಡ ಇವರ ಮನೆಯಿಂದ ವಿಚಿತ್ರವಾದ ಶಬ್ಧ ಹಾಗೂ ಅಳುತ್ತಿರುವ ಸದ್ದು ಕೇಳಿ ಬಂದಿದೆ. ಪೊಲೀಸರು ಮನೆಯೊಳಗೆ ಬರುತ್ತೇನೆ ಎಂದಾಗ ದಂಪತಿ ಇದಕ್ಕೆ ನಿರಾಕರಿಸಿದ್ದಾರೆ. ಆದರೆ ಪೊಲೀಸರು ಬಲವಂತದಿಂದ ಮನೆಯೊಳಗೆ ಪ್ರವೇಶ ಮಾಡ್ತಿದ್ದಂತೆಯೇ ಈ ವಿಚಾರ ಬೆಳಕಿಗೆ ಬಂದಿದೆ.

ಒಬ್ಬಳ ಮೃತ ದೇಹ ದೇವರ ಕೋಣೆಯಲ್ಲಿ ಕಂಡು ಬಂದಿದ್ದರೆ ಇನ್ನೊಬ್ಬಳ ಮೃತದೇಹ ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿದೆ. ಮೃತದೇಹಗಳ ಮೇಲೆ ಕೆಂಪು ಬಟ್ಟೆಯಿಂದ ಮುಚ್ಚಲಾಗಿತ್ತು. ಶವಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು ದಂಪತಿಯನ್ನ ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...