alex Certify 4 ತಿಂಗಳ ಬಳಿಕ ಬಹಿರಂಗವಾಯ್ತು ಮೂವರ ಸಾವಿನ ಹಿಂದಿನ ’ರಹಸ್ಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ತಿಂಗಳ ಬಳಿಕ ಬಹಿರಂಗವಾಯ್ತು ಮೂವರ ಸಾವಿನ ಹಿಂದಿನ ’ರಹಸ್ಯ’

ಬೈಕ್ ನಿಯಂತ್ರಣ ತಪ್ಪಿ ಕಾಲುವೆಯೊಂದಕ್ಕೆ ಬಿದ್ದಿದೆ. ಈ ವೇಳೆ ಬೈಕ್ ಸವಾರನನ್ನ ರಕ್ಷಣೆ ಮಾಡಲಾಗಿತ್ತು. ಆದರೆ ಬೈಕ್‌ನಲ್ಲಿದ್ದ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಹೀಗೆ ಬೈಕ್‌ನ ಕಾಲುವೆಯಿಂದ ಮೇಲೆತ್ತುವಾಗ ಆಶ್ಚರ್ಯವೊಂದು ಕಾದಿತ್ತು. ಈ ಬೈಕ್ ಜೊತೆಗೆ ಕಾರೊಂದು ಕಾಲುವೆಗೆ ಬಿದ್ದಿದ್ದು ಅದನ್ನೂ ಮೇಲೆತ್ತಲಾಗಿದೆ. ಈ ಕಾರಿನಲ್ಲಿದ್ದ ಮೂರು ಮಂದಿ ಮೃತಪಟ್ಟಿದ್ದಾರೆ. ಈ ಸಾವಿಗೆ ಇದೀಗ ಟ್ವಿಸ್ಟ್ ಸಿಕ್ಕಿದೆ.

ಈ ಘಟನೆ ನಡೆದಿದ್ದು ಫೆಬ್ರವರಿಯಲ್ಲಿ. ತೆಲಂಗಾಣದ ಕರೀಮ್‌ ನಗರ ಜಿಲ್ಲೆಯ ತಿಮ್ಮಾಪುರ್ ಮಂಡಲದ ಯಡಾಲಪಲ್ಲಿ ಗ್ರಾಮದ ಬಳಿಯ ಕಾಕಾತಿಯ ಕಾಲುವೆಯಲ್ಲಿ ಕಾರು ಬಿದ್ದು ನಾಲ್ಕು ತಿಂಗಳಾದ ನಂತರ ಪತ್ತೆಯಾಗಿತ್ತು. ಇದರಲ್ಲಿದ್ದವರನ್ನು ಸತ್ಯನಾರಾಯಣ, ಅವರ ಪತ್ನಿ ರಾಧಾ ಹಾಗೂ ಮಗಳು ವಿನಯಶ್ರೀ ಎಂದು ಗುರುತಿಸಲಾಗಿತ್ತು. ಈ ಘಟನೆ ಸಂಬಂಧ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ತನಿಖೆಯಿಂದ ಸತ್ಯವೊಂದು ಬಯಲಾಗಿದೆ.

ಈ ಮೂರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸತ್ಯನಾರಾಯಣ್ ಬರೆದಿರುವ ಡೆತ್ ನೋಟ್ ಪ್ರಕಾರ ಇದೊಂದು ಆತ್ಮಹತ್ಯೆ ಎಂದು ಪೊಲೀಸರು ಘೋಷಣೆ ಮಾಡಿದ್ದಾರೆ. ಒಟ್ಟು ನಾಲ್ಕು ತಿಂಗಳ ಬಳಿಕ ಈ ಸಾವಿನ ರಹಸ್ಯ ಬಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...