alex Certify 3 ಮೂರು ವರ್ಷಗಳ ಹಿಂದೆ ಸತ್ತಿದ್ದ ವ್ಯಕ್ತಿ ಲಾಕ್ ಡೌನ್ ನಲ್ಲಿ ಮನೆಗೆ ಬಂದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ಮೂರು ವರ್ಷಗಳ ಹಿಂದೆ ಸತ್ತಿದ್ದ ವ್ಯಕ್ತಿ ಲಾಕ್ ಡೌನ್ ನಲ್ಲಿ ಮನೆಗೆ ಬಂದ…!

ಕೊರೊನಾ ವೈರಸ್, ಲಾಕ್ ಡೌನ್ ಜನರಲ್ಲಿ ಭಯ ಹುಟ್ಟಿಸಿದೆ. ಆದ್ರೆ ಮಧ್ಯಪ್ರದೇಶದ ಛತರಪುರದ ಕುಟುಂಬವೊಂದಕ್ಕೆ ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಸತ್ತ ಮಗ ಜೀವಂತವಾಗಿ ಸಿಕ್ಕಿದ್ದಾನೆ.

ಮೂರು ವರ್ಷಗಳ ಹಿಂದೆ ಬಿಜಾವರ್ ಪ್ರದೇಶದ ಅರಣ್ಯದಲ್ಲಿ ಅಸ್ಥಿ ಪಂಜರವೊಂದು ಸಿಕ್ಕಿತ್ತು. ಭಗೋಲಾ ಬುಡಕಟ್ಟು ಜನಾಂಗದ ಉದಯ್ ತಂದೆ ಇದು ತನ್ನ ಮಗನ ಶವವೆಂದು ಅಂತ್ಯಸಂಸ್ಕಾರ ಮಾಡಿದ್ದರು. ಆದ್ರೆ ಮೂರು ವರ್ಷಗಳ ನಂತ್ರ ಸತ್ತಿದ್ದಾನೆ ಎಂದುಕೊಂಡಿದ್ದ ಉದಯ್ ಮನೆಗೆ ಬಂದಿದ್ದಾನೆ. ಮಗನನ್ನು ನೋಡಿದ ಕುಟುಂಬಸ್ಥರು ಖುಷಿಯಾಗಿದ್ದಾರೆ.

ಮನೆಯಲ್ಲಿ ಜಗಳವಾಡಿ ಉದಯ್ ಜಾರ್ಖಂಡ್ ಗೆ ಹೋಗಿದ್ದ. ಲಾಕ್ ಡೌನ್ ಕಾರಣ ಮನೆಗೆ ವಾಪಸ್ ಬಂದಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮೂರು ವರ್ಷಗಳ ಹಿಂದೆ ಸಿಕ್ಕ ಅಸ್ಥಿಪಂಜರ ಯಾರದ್ದು ಎಂಬ ಹುಡುಕಾಟ ಶುರುವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...