ಲಾಕ್ ಡೌನ್ ಆದ ನಂತರ ಅನೇಕ ಕಾರ್ಮಿಕರು ಪಟ್ಟಣ ಬಿಟ್ಟು ಹಳ್ಳಿಗಳಿಗೆ ತೆರಳಿದ್ದಾರೆ. ಇವರಿಗೆಲ್ಲಾ ಸರ್ಕಾರವೇ ಬಸ್, ರೈಲುಗಳ ವ್ಯವಸ್ಥೆ ಮಾಡಿ ಕೊಟ್ಟಿದೆ. ಈಗಾಗಲೇ ಲಕ್ಷಾಂತರ ಮಂದಿ ಹಳ್ಳಿಗಳಿಗೆ ವಾಪಸ್ ಆಗಿದ್ದಾರೆ. ವಾಪಸ್ಸಾದ ವಲಸೆ ಕಾರ್ಮಿಕರಿಗೆ ಸರ್ಕಾರ ಸೌಲಭ್ಯ ಒಂದನ್ನು ನೀಡಿದೆ. ನೀವು ಕೂಡ ಕಿಸಾನ್ ಸಮ್ಮಾನ್ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.
ಹೌದು, ಕಿಸಾನ್ ಸಮ್ಮಾನ್ ಯೋಜನೆ ಕೇವಲ ರೈತರಿಗಷ್ಟೆ ಅಲ್ಲ, ವಲಸೆ ಕಾರ್ಮಿಕರಿಗೂ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಸವಲತ್ತು ಮಾಡಿದೆ. ಈ ಸಲವತ್ತು ನಿಮ್ಮದಾಗಬೇಕು ಅಂದರೆ ನೀವು ವಯಸ್ಕರಾಗಿರಬೇಕು ಮತ್ತು ನಿಮ್ಮ ಹೆಸರನ್ನು ತೆರಿಗೆ ಇಲಾಖೆ ದಾಖಲೆಗಳಲ್ಲಿ ಸೇರಿಸಬೇಕು.
ಕೃಷಿ ದಾಖಲೆಯಲ್ಲಿ ನಿಮ್ಮ ಮನೆಯ ಯಾರೊಬ್ಬರ ಹೆಸರನ್ನು ಸೇರಿಸಿದ್ದರೂ, ಪ್ರತ್ಯೇಕವಾಗಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.
ಇನ್ನು ಈ ಯೋಜನೆ ಪಡೆಯಲು ಕಚೇರಿ ಸುತ್ತುವ ಅಗತ್ಯ ಇಲ್ಲ. ಯೋಜನೆಯ ವೆಬ್ಸೈಟ್ ಮೂಲಕವೇ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಜೊತೆಗೆ ಸರ್ಕಾರದ ಈ ಎಲ್ಲಾ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಟ್ನಲ್ಲಿ ಕಾರ್ಮಿಕರಿಗೂ ಕೂಡ ರೈತರಂತೆ ಸವಲತ್ತು ಸಿಗಲಿ ಅಂತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.