ಗುಜರಾತಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಸಿವಿಲ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಕುಟುಂಬಸ್ಥರ ಗೊಂದಲಕ್ಕೆ ಕಾರಣವಾಗಿದೆ. ಅನಾರೋಗ್ಯದ ಕಾರಣ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಆಸ್ಪತ್ರೆ ಸಿಬ್ಬಂದಿ ಕುಟುಂಬಸ್ಥರಿಗೆ ಕರೆ ಮಾಡಿ ಈ ವಿಷ್ಯ ತಿಳಿಸಿದ್ದಾರೆ.
ಆಸ್ಪತ್ರೆಗೆ ಬಂದ ಕುಟುಂಬಸ್ಥರಿಗೆ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿದ್ದಾನೆ ಎಂದಿದ್ದಾರೆ. ಹಾಗಾಗಿ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರಿಗೆ ಬಿಡಲಿಲ್ಲ. ಎರಡು ದಿನ ಬಿಟ್ಟು ಕುಟುಂಬಸ್ಥರಿಗೆ ಕರೆ ಮಾಡಿದ ಆಸ್ಪತ್ರೆ ಸಿಬ್ಬಂದಿ ದೇವರಾಮ್ ಭಾಯ್ ಸಾವನ್ನಪ್ಪಿಲ್ಲ. ಸ್ಪೆಷಲ್ ವಾರ್ಡ್ ಗೆ ಹಾಕಿದ್ದೇವೆ ಎಂದಿದ್ದಾರೆ.
ಕುಟುಂಬಸ್ಥರು ಆಸ್ಪತ್ರೆಗೆ ಬಂದಾಗ ಸಿಬ್ಬಂದಿ ಸತ್ಯ ಹೇಳಿದ್ದಾರೆ. ಮತ್ತೆ ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ದೇವರಾಮ್ ಭಾಯ್ ಸತ್ತಿದ್ದು ಸತ್ಯ. ಆದ್ರೆ ಸಾಯುವ ಮೊದಲು ಕೊರೊನಾ ಪರೀಕ್ಷೆ ಮಾಡಲಾಗಿತ್ತು. ವರದಿ ಅಂತಿಮ ಸಂಸ್ಕಾರದ ನಂತ್ರ ಬಂದಿದೆ. ವರದಿ ನೆಗೆಟಿವ್ ಆಗಿತ್ತು ಎಂದಿದ್ದಾರೆ. ಕೊರೊನಾ ಭಯದಲ್ಲಿ ದೇವರಾಮ್ ಭಾಯ್ ಮುಖವನ್ನೂ ಕುಟುಂಬಸ್ಥರಿಗೆ ನೋಡಲಾಗಲಿಲ್ಲ.