alex Certify ವಿವಾಹಿತೆ ಓಡಿಸಿಕೊಂಡು ಹೋದ ಮಗ: ಆತ್ಮಹತ್ಯೆ ಮಾಡಿಕೊಂಡ ನೊಂದ ಪಾಲಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹಿತೆ ಓಡಿಸಿಕೊಂಡು ಹೋದ ಮಗ: ಆತ್ಮಹತ್ಯೆ ಮಾಡಿಕೊಂಡ ನೊಂದ ಪಾಲಕರು

ವಿವಾಹಿತೆಯನ್ನು ಮಗ ಓಡಿಸಿಕೊಂಡು ಹೋಗಿದ್ದಾನೆ. ಇದು ಪಾಲಕರಿಗೆ ಶಾಪವಾಗಿ ಪರಿಣಮಿಸಿದೆ. ಅಕ್ಕಪಕ್ಕದವರ ಮಾತು ಕೇಳಲಾರದೆ ಪಾಲಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ನಡೆದಿದೆ.

ಸಾಂಪ್ರದಾಯಿಕ ಕುಟುಂಬದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಮನೆ ಬಾಗಿಲು ತೆಗೆಯದ ಕಾರಣ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದಾಗ ಸತ್ಯ ಹೊರಬಿದ್ದಿದೆ.

ಕೆಲ ದಿನಗಳಿಂದ ದಂಪತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಈ ಮಧ್ಯೆ ಮಗ ವಿವಾಹಿತೆಯನ್ನು ಓಡಿಸಿಕೊಂಡು ಹೋಗಿದ್ದ. ಮಗ ಮಾಡಿದ ಕೆಲಸಕ್ಕೆ ಅಕ್ಕಪಕ್ಕದವರು ಪಾಲಕರ ಮೇಲೆ ಗೂಬೆ ಕೂರಿಸಿದ್ದರು. ನೆರೆಯವರ ಮಾತಿನಿಂದ ಮತ್ತಷ್ಟು ನೊಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...