alex Certify ರೈಣಿ ಗ್ರಾಮದಲ್ಲಿ ಭಾರೀ ಹಿಮಕುಸಿತ: ಕೊಚ್ಚಿ ಹೋದ ಮನೆಗಳು – ನಾಪತ್ತೆಯಾದ ಕಾರ್ಮಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಣಿ ಗ್ರಾಮದಲ್ಲಿ ಭಾರೀ ಹಿಮಕುಸಿತ: ಕೊಚ್ಚಿ ಹೋದ ಮನೆಗಳು – ನಾಪತ್ತೆಯಾದ ಕಾರ್ಮಿಕರು

ಡೆಹ್ರಾಡೂನ್: ಭಾರೀ ಹಿಮಕುಸಿತದಿಂದಾಗಿ ಉತ್ತರಾಖಂಡದ ಜನತೆ ತತ್ತರಿಸಿದ್ದು, ಇಲ್ಲಿನ ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಪಾತದಿಂದಾಗಿ ದೌಲಿಗಂಗಾ ನದಿಯಲ್ಲಿ ಭೀಕರ ಪ್ರವಾಹ ಉಂಟಾಗಿದೆ.

ಹಿಮಕುಸಿತದಿಂದಾಗಿ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದು, ತಪೋವನ ಪ್ರದೇಶದಲ್ಲಿ ದೌಲಿಗಂಗಾ ನದಿ ಉಕ್ಕಿ ಹರಿದಿದೆ. ಅದಾಗಲೇ ಹಿಮ ಕುಸಿತದಿಂದ ತತ್ತರಿಸಿದ್ದ ಹಲವು ಮನೆಗಳು ನದಿ ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೋಗಿವೆ.

ನೋಡುಗರ ಎದೆ ಝಲ್ಲೆನಿಸಿದ ದೃಶ್ಯ: ಏಕಾಏಕಿ ಭಾರೀ ಹಿಮ ಕುಸಿತಕ್ಕೆ ನದಿಯಲ್ಲಿ ದಿಢೀರ್ ಪ್ರವಾಹ

ಭಾರೀ ಹಿಮಪಾತದಿಂದಾಗಿ ಋಷಿಗಂಗಾ ಯೋಜನೆಯ ಪವರ್ ಪ್ರಾಜೆಕ್ಟ್ ಗೂ ಹಾನಿಯಾಗಿದೆ. ಒಂದೆಡೆ ಪ್ರವಾಹದ ಸೆಳೆತ, ಇನ್ನೊಂದೆಡೆ ಹಿಮ ಕುಸಿತದ ಅಬ್ಬರಕ್ಕೆ ಸಿಲುಕಿರುವ ಹಲವು ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...