alex Certify ಮೊಸಳೆ ಇಟ್ಟುಕೊಂಡು ಹಣ ಮಾಡಲು ಹೊರಟಿದ್ದ ಗ್ರಾಮಸ್ಥರಿಗೆ ಬಿಸಿ ಮುಟ್ಟಿಸಿದ ಅರಣ್ಯ ಅಧಿಕಾರಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆ ಇಟ್ಟುಕೊಂಡು ಹಣ ಮಾಡಲು ಹೊರಟಿದ್ದ ಗ್ರಾಮಸ್ಥರಿಗೆ ಬಿಸಿ ಮುಟ್ಟಿಸಿದ ಅರಣ್ಯ ಅಧಿಕಾರಿಗಳು…!

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಸಳೆ ಸಂರಕ್ಷಿತ ಪ್ರಾಣಿ ಎಂಬುದು ಗೊತ್ತಿರುವ ವಿಚಾರವೇ. ಆದರೆ ಒಂದಿಷ್ಟು ಹಳ್ಳಿ ಜನರಿಗೆ ಈ ವಿಚಾರ ಗೊತ್ತಿಲ್ಲ ಅನ್ನೋದಕ್ಕೆ ಲಖನೌನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಮೊಸಳೆಯನ್ನು ಹಿಡಿದಿಟ್ಟುಕೊಂಡ ಹಣ ಮಾಡಲು ಪ್ಲಾನ್ ಮಾಡಿದ್ದ ಹಳ್ಳಿ ಜನರಿಗೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಬುದ್ದಿ ಕಲಿಸಿದ್ದಾರೆ.

ಹೌದು, ಉತ್ತರ ಪ್ರದೇಶದ ಭಾಗದಲ್ಲಿ ಮಾನ್ಸೂನ್ ಮಳೆ ಸುರಿದಿದೆ. ಮಳೆಯಿಂದ ಪ್ರವಾಹ ಉಂಟಾಗಿದೆ. ಈ ವೇಳೆ ಮೊಸಳೆಯೊಂದು ಕೊಚ್ಚಿಕೊಂಡು ಬಂದು ಮಿದಾನಿಯಾ ಗ್ರಾಮದ ಕೆರೆ ಸೇರಿದೆ. ಇದನ್ನು ನೋಡಿದ್ದ ಗ್ರಾಮಸ್ಥರು 8 ಅಡಿ ಉದ್ದದ ಮೊಸಳೆಯನ್ನು ಹಿಡಿದು ಒತ್ತೆ ಇರಿಸಿಕೊಂಡಿದ್ದಾರೆ.

ಈ ವಿಚಾರ ತಿಳಿದ ಅರಣ್ಯಾಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಗರಾಮಕ್ಕೆ ಹೋಗಿ ಮೊಸಳೆ ಬಿಡಿ ಎಂದು ಕೇಳಿದಾಗ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಗ್ರಾಮಸ್ಥರು. ಸುಮಾರು 50 ಸಾವಿರ ಹಣ ನೀಡಿದರೆ ಮೊಸಳೆ ಬಿಡುವುದಾಗಿ ಹೇಳಿದ್ದಾರೆ. ಈ ವೇಳೆ ನೀವು ಮೊಸಳೆ ಬಿಡದೇ ಇದ್ದರೆ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನಂತರ ಮೊಸಳೆಯನ್ನು ಆ ಗ್ರಾಮಸ್ಥರು ಬಿಟ್ಟಿದ್ದಾರೆ. ನಂತರ ಮೊಸಳೆಯನ್ನು ಗಂಗಾ ನದಿಗೆ ಬಿಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...