ಮಹಾಮಾರಿ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈ ಮೊದಲು ಎರಡು ಬಾರಿ ಲಾಕ್ ಜಾರಿಗೊಳಿಸಿದ್ದು, ಇದೀಗ ಮೂರನೇ ಬಾರಿಗೆ ಲಾಕ್ ಡೌನ್ ಘೋಷಿಸಿದೆ. ಮೇ 17 ರ ವರೆಗೆ ಇದು ಜಾರಿಯಲ್ಲಿದ್ದು, ಆ ಬಳಿಕ ಮುಂದೇನು ಎಂಬ ಪ್ರಶ್ನೆ ಈಗ ಕೇಳಿ ಬರುತ್ತಿದೆ.
ಇದರ ಮಧ್ಯೆ ತೆಲಂಗಾಣ ಸರ್ಕಾರ ಮೇ 29 ರವರೆಗೆ ಲಾಕ್ ಡೌನ್ ಮುಂದುವರಿಸಲು ತೀರ್ಮಾನಿಸಿದ್ದು, ಗ್ರಾಮೀಣ ಹಾಗೂ ಮುನ್ಸಿಪಲ್ ಪ್ರದೇಶಗಳಲ್ಲಿ ಒಂದಷ್ಟು ನಿಯಮ ಸಡಿಲಿಸಲು ನಿರ್ಧರಿಸಿದೆ.
ತೆಲಂಗಾಣದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಂದು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.