ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜೂನ್ 30ರವರೆಗೆ ಯಾವುದೇ ಸಾಮಾನ್ಯ ರೈಲುಗಳನ್ನು ಓಡಿಸದಿರಲು ನಿರ್ಧರಿಸಿದೆ. ಅಲ್ಲಿಯವರೆಗೆ ಯಾವುದೇ ರಿಸರ್ವೇಶನ್ ಇರುವುದಿಲ್ಲವೆಂದು ರೈಲ್ವೆ ಇಲಾಖೆ ಹೇಳಿದೆ. ರೈಲ್ವೆ ಇಲಾಖೆ ಪ್ರಕಾರ ಶ್ರಮಿಕ್ ರೈಲು ಹಾಗೂ ಸ್ಪೆಷಲ್ ಟ್ರೈನ್ ಮಾತ್ರ ಓಡಲಿದೆ.
ಟಿಕೆಟ್ ಗಳನ್ನು ರದ್ದುಗೊಳಿಸಿದ ಪ್ರಯಾಣಿಕರಿಗೆ ಐಆರ್ಸಿಟಿಸಿ ಶೀಘ್ರದಲ್ಲೇ ಟಿಕೆಟ್ ಹಣವನ್ನು ಮರು ಪಾವತಿಸಲು ಮುಂದಾಗಿದೆ. ಮಾರ್ಚ್ 22ರಿಂದ ದೇಶದಾದ್ಯಂತ ರೈಲುಗಳನ್ನು ಮುಚ್ಚಲಾಗಿದೆ. ಆದ್ರೆ ಏಪ್ರಿಲ್ 14ರವರೆಗಿನ ರೈಲುಗಳ ಟಿಕೆಟ್ ಬುಕ್ಕಿಂಗ್ ನಡೆದಿತ್ತು. ಮಾರ್ಚ್ 22 ಕ್ಕಿಂತ ಮುಂಚೆಯೇ, ಲಕ್ಷಾಂತರ ಜನರು ಆನ್ಲೈನ್ ಮತ್ತು ಕೌಂಟರ್ ಮೂಲಕ ಟಿಕೆಟ್ ಖರೀದಿಸಿದ್ದರು. ಲಾಕ್ಡೌನ್ ಘೋಷಿಸಿದ ಪ್ರಯಾಣಿಕರ ಹಣ ರೈಲ್ವೆ ಇಲಾಖೆ ಬಳಿಯಿತ್ತು. ಅದನ್ನು ವಾಪಸ್ ಮಾಡಲಾಗ್ತಿದೆ.
ಈಗ ಟಿಕೆಟ್ ಹಣ ಮರುಪಾವತಿ ಮಾಡಲಾಗ್ತಿದೆ. ಹಾಗೆ ಜೂನ್ 30ರ ತನಕ ಸಾಮಾನ್ಯ ರೈಲು ಓಡುವುದಿಲ್ಲವೆಂದು ರೈಲ್ವೆ ಇಲಾಖೆ ಹೇಳಿದೆ.