ಆಂಧ್ರಪ್ರದೇಶದ ವೈಜಾಗ್ ನಲ್ಲಿರುವ ರಾಸಾಯನಿಕ ಸ್ಥಾವರದಿಂದ ಅನಿಲ ಸೋರಿಕೆಯಾಗಿದ್ದು ಇದರ ಪರಿಣಾಮ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ. 200ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅನಿಲ ಸೇವನೆ ಮಾಡಿದವರು ಅಲ್ಲಲ್ಲೇ ಪ್ರಜ್ಞಾಹೀನರಾಗಿ ಬೀಳುತ್ತಿದ್ದು, ಇವರುಗಳನ್ನು ರಕ್ಷಣಾ ತಂಡ ಆಸ್ಪತ್ರೆಗೆ ದಾಖಲಿಸುತ್ತಿದೆ. ಅಲ್ಲಿನ ಪರಿಸ್ಥಿತಿ ತೀರಾ ಕಳವಳಕಾರಿಯಾಗಿದ್ದು, ಈ ರಾಸಾಯನಿಕ ಸ್ಥಾವರ ಸುತ್ತಮುತ್ತಲಿನ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ.
ಬೆಳಗಿನ ಜಾವದ ಸುಖ ನಿದ್ರೆಯಲ್ಲಿದ್ದವರು ಏನಾಗುತ್ತಿದೆ ಎಂದು ಅರಿಯುವುದರೊಳಗೆ ಮಾರಕ ಅನಿಲ ಸೇವಿಸಿದ್ದಾರೆ. ಇದರಿಂದಾಗಿ ಮಹಿಳೆಯರು, ಮಕ್ಕಳೆನ್ನದೆ ಎಲ್ಲ ವಯೋಮಾನದವರು ಪ್ರಜ್ಞಾಹೀನರಾಗಿದ್ದಾರೆ.