ಕೊರೊನಾದಿಂದಾಗಿ ಇಡೀ ಮಾನವ ಕುಲವೇ ನಲುಗುತ್ತಿದೆ. ಕಾಣದ ಮಾಯೆಯ ಹಾಗೆ ಬಂದು ಜನರ ಜೀವ, ಜೀವನವನ್ನು ಈ ವೈರಸ್ ಬಲಿಪಡೆಯುತ್ತಿದೆ. ಕೊರೊನಾದಿಂದಾಗಿ ದೇಶ ಲಾಕ್ ಡೌನ್ ಆಗಿದೆ. ಇದರಿಂದಾಗಿ ಆರ್ಥಿಕತೆ ಮೇಲೆ ಹೊಡೆತ ಬಿದ್ದಿರೋದಂತೂ ಸತ್ಯ. ಇತ್ತ ರೈತರೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ದೇಶದ ಜನತೆಯ ಬೆನ್ನಿಗೆ ನಿಂತಿದೆ ಸರ್ಕಾರ. ಅದರಲ್ಲೂ ರೈತಾಪಿ ವರ್ಗದ ಜನರಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ.
ಹೌದು, ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳ ಮೂಲಕ ರೈತರಿಗೆ ನೆರವಾಗುತ್ತಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಸೌಲಭ್ಯವನ್ನು ರೈತರಿಗೆ ನೀಡಲು ಮುಂದಾಗಿದೆ ಎನ್ನಲಾಗಿದೆ. ಅದೇ ಸಾಲ ಮನ್ನಾ. ಈ ಮೂಲಕ ರೈತರಿಗೆ ಮತ್ತೊಂದು ಪ್ಯಾಕೇಜ್ ನೀಡಲು ಮೋದಿ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ. ಅತೀ ದೊಡ್ಡ ಮಟ್ಟದಲ್ಲಿ ಸಾಲ ಮನ್ನಾ ಮಾಡಲು ಚಿಂತನೆ ಮಾಡುತ್ತಿದ್ದಾರಂತೆ ಪ್ರಧಾನಿ ಮೋದಿ.
ಮೂರ್ನಾಲ್ಕು ಹಂತದಲ್ಲಿ ಈ ಸಾಲ ಮನ್ನಾ ಮಾಡಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಲಾಕ್ ಡೌನ್ ನಿಂದಾಗಿ ಬೆಲೆಗಳ ಕುಸಿತ, ಬೆಳೆ ಮಾರಾಟವಾಗದೆ ರೈತರು ಕಂಗೆಟ್ಟಿದ್ದಾರೆ. ಹೀಗಾಗಿ ಸಾಲ ಮನ್ನಾ ಮಾಡಿದರೆ ಅವರಿಗೆ ಅನುಕೂಲ ಆಗಲಿದೆ ಎಂಬ ಉದ್ದೇಶದಿಂದ ಈ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.