ಬರೇಲಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಐದು ಮಕ್ಕಳ ತಾಯಿಯೊಬ್ಬಳು ಬಾಡಿಗೆದಾರನ ಜೊತೆ ಓಡಿ ಹೋದ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ಪತಿ ನಿವೃತ್ತ ರೈಲ್ವೆ ಅಧಿಕಾರಿಯಾಗಿದ್ದ. ಐದು ವರ್ಷಗಳ ಹಿಂದೆ ಆತ ಕಾಲು ಮುರಿದುಕೊಂಡಿದ್ದ. ಇದಾದ್ಮೇಲೆ ಪತ್ನಿ ಬಾಡಿಗೆದಾರನ ಜೊತೆ ಮನೆ ಬಿಟ್ಟಿದ್ದಳು.
ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿದ್ದಳು. ಆದ್ರೆ ಮೂವರು ಗಂಡು ಮಕ್ಕಳನ್ನು ಬಿಟ್ಟು ಹೋಗಿದ್ದಳು. ಲಾಕ್ ಡೌನ್ ಸಂದರ್ಭದಲ್ಲಿ ಮಹಿಳೆ ಪತಿ ಸಾವನ್ನಪ್ಪಿದ್ದಾನೆ. ಈ ಸುದ್ದಿ ತಿಳಿದ ಮಹಿಳೆ ಮನೆಗೆ ಬಂದಿದ್ದಾಳೆ. ಆಸ್ತಿಯನ್ನು ಮಾರಾಟ ಮಾಡಿ ನಿಮ್ಮನ್ನು ಜೊತೆಗೆ ಕರೆದುಕೊಂಡು ಹೋಗ್ತೇನೆಂದು ಮಕ್ಕಳಿಗೆ ಹೇಳಿದ್ದಾಳೆ.
ಗಂಡು ಮಕ್ಕಳು ತಾಯಿ ಜೊತೆ ಹೋಗಲು ನಿರಾಕರಿಸಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದೆ.