ಉತ್ತರ ಪ್ರದೇಶದ ಮುರಾದಾಬಾದ್ ನಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯೊಬ್ಬ ಪತ್ನಿ ಹತ್ಯೆಗೈದು ಪೊಲೀಸ್ ಠಾಣೆಗೆ ಬಂದಿದ್ದಾನೆ. ತಪ್ಪೊಪ್ಪಿಕೊಂಡ ಪತಿ, ಪತ್ನಿ ಹತ್ಯೆಗೆ ಕಾರಣವೇನು ಎಂಬುದನ್ನು ಹೇಳಿದ್ದಾನೆ.
ಆರೋಪಿ ಬಿಹಾರ್ ಮೂಲದ ಮಹಿಳೆಯನ್ನು ಮದುವೆಯಾಗಿದ್ದನಂತೆ. ಇಬ್ಬರಿಗೆ ನಾಲ್ವರು ಮಕ್ಕಳಂತೆ. ಈಗ ಮಹಿಳೆ ಬೇರೆಯವರನ್ನು ಪ್ರೀತಿಸುತ್ತಿದ್ದಳಂತೆ. ನಾನು ಆಕೆಯನ್ನು ಹತ್ಯೆ ಮಾಡದೆ ಹೋದಲ್ಲಿ ಆಕೆ ನನ್ನನ್ನು ಹತ್ಯೆ ಮಾಡ್ತಿದ್ದಳು. ಹಾಗಾಗಿ ಆಕೆಯನ್ನು ಕೊಲೆ ಮಾಡಿದ್ದೇನೆಂದು ಪತಿ ಹೇಳಿದ್ದಾನೆ.
ಹತ್ಯೆಗೂ ಮುನ್ನ ಮಕ್ಕಳನ್ನು ಅಣ್ಣನ ಮನೆಗೆ ಕಳುಹಿಸಿದ್ದನಂತೆ ಆರೋಪಿ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.