alex Certify ಗಡಿ ವಿಚಾರದಲ್ಲಿ ಚೀನಾ ಭಾರತವನ್ನು ನಡೆಸಿಕೊಳ್ಳುವಂತೆ ಕೇಂದ್ರ ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿದೆ: ಪಿ.ಚಿದಂಬರಂ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿ ವಿಚಾರದಲ್ಲಿ ಚೀನಾ ಭಾರತವನ್ನು ನಡೆಸಿಕೊಳ್ಳುವಂತೆ ಕೇಂದ್ರ ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿದೆ: ಪಿ.ಚಿದಂಬರಂ ಕಿಡಿ

ನವದೆಹಲಿ: ಗಡಿ ವಿಚಾರದಲ್ಲಿ ಚೀನಾ ಭಾರತವನ್ನು ಹೇಗೆ ನಡೆಸಿಕೊಳ್ಳುತ್ತಿದೆಯೋ ಹಾಗೇ ಭಾರತ ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಪಿ. ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.

11 ಸುತ್ತು ಮಾತುಕತೆಗಳು ನಡೆದರೂ ಕೂಡ ಚೀನಾ, ಗಡಿಯಿಂದ ಒಂದಿಂಚೂ ಹಿಂದೆ ಸರಿದಿಲ್ಲ. ಅದೇ ರೀತಿ ಕೇಂದ್ರ ಸರ್ಕಾರ ಕೂಡ ರೈತರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆದರೂ ರೈತರು, ಸರ್ಕಾರದ ನಡುವೆ ನಿರ್ಧಾರ ಬದಲಾಗಿಲ್ಲ ಎಂದು ಹೇಳಿದ್ದಾರೆ.

ರೈಲು ಪ್ರಯಾಣದ ವೇಳೆ ಇ-ಕೆಟರಿಂಗ್ ಸೇವೆ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ಘಾಜಿಪುರ, ಸಿಂಘು ಹಾಗೂ ಟಕ್ರಿ ಗಡಿಯಲ್ಲಿ ಭದ್ರತಾ ಪಡೆ ನಿಯೋಜನೆ, ಹಲವು ದಿನಗಳಿಂದ ಬ್ಯಾರಿಕೇಡ್ ಗಳ ಅಳವಡಿಕೆ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂಥಹ ದೃಶ್ಯಗಳು ಎಲ್ಲಾದರೂ ಕಾಣಲು ಸಾಧ್ಯವೇ ಎಂದು ಗುಡುಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...