alex Certify ಕೆಸರಲ್ಲಿ ಕೂತು ಶಂಖ ಊದಿದ್ರೆ ಕೊರೊನಾ ಬರಲ್ಲ ಎಂದಿದ್ದ ಸಂಸದಗೆ ‘ಪಾಸಿಟಿವ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಸರಲ್ಲಿ ಕೂತು ಶಂಖ ಊದಿದ್ರೆ ಕೊರೊನಾ ಬರಲ್ಲ ಎಂದಿದ್ದ ಸಂಸದಗೆ ‘ಪಾಸಿಟಿವ್’

Sukhbir Singh Jaunapuria / Facebook.

ಕೆಸರಿನಲ್ಲಿ ಕುಳಿತು ಶಂಖ ಊದಿದ್ರೆ ಕೊರೊನಾ ಬರುವುದಿಲ್ಲವೆಂದಿದ್ದ ಸಂಸದ ಸುಖ್ಬೀರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಸುಖ್ಬೀರ್ ಸಿಂಗ್ ಗೆ ಕೊರೊನಾ ಕಾಣಿಸಿಕೊಂಡಿದೆ. ಅವ್ರಿಗೆ ಕೊರೊನಾ ಪಾಸಿಟಿವ್ ಎಂಬುದು ಗೊತ್ತಾಗ್ತಿದ್ದಂತೆ ಅವ್ರ ಹಳೆ ವಿಡಿಯೋ ವೈರಲ್ ಆಗಿದೆ.

ಕೊರೊನಾ ಲಸಿಕೆ ಕಂಡು ಹಿಡಿಯಲು ವಿಶ್ವದಾದ್ಯಂತ ಪ್ರಯತ್ನ ನಡೆಯುತ್ತದೆ. ಈ ಮಧ್ಯೆ ಅನೇಕರು ತಮ್ಮ ಸಲಹೆಗಳನ್ನು ಇಡುತ್ತಿದ್ದಾರೆ. ಇದ್ರಲ್ಲಿ ರಾಜಸ್ತಾನದ ಬಿಜೆಪಿ ಸಂಸದ ಸುಖ್ಬೀರ್ ಸಿಂಗ್ ಜೌನಪುರಿಯ ಸೇರಿದ್ದರು. ಕೆಸರಿನಲ್ಲಿ ಕುಳಿತು, ಮೈಗೆಲ್ಲ ಕೆಸರು ಮೆತ್ತಿಕೊಂಡು ಶಂಖ ಊದಿದ್ದ ಸುಖ್ಬೀರ್, ಇದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದಿದ್ದರು.

ಕೊರೊನಾದಿಂದ ದೂರವಿರಲು ಪ್ರಕೃತಿಗೆ ಹತ್ತಿರವಾಗಬೇಕು. ನೈಸರ್ಗಿಕ ಆಹಾರ ಸೇವನೆ ಮಾಡಬೇಕು. ಸೈಕ್ಲಿಂಗ್ ಮಾಡಬೇಕು. ವ್ಯಾಯಾಮ ಮಾಡಬೇಕು. ಶಂಖ ಊದಬೇಕೆಂದಿದ್ದರು. ಅವ್ರ ವಿಡಿಯೋ ಆಗ ಸುದ್ದಿ ಮಾಡಿತ್ತು. ಮತ್ತೆ ಈ ವಿಡಿಯೋ ವೈರಲ್ ಆಗಿದೆ.

ಸಂಸತ್ ಅಧಿವೇಶನಕ್ಕೂ ಮುನ್ನ ಸಂಸದರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದೆ. ಇದ್ರಲ್ಲಿ 30 ಸಂಸದರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದ್ರಲ್ಲಿ ಸುಖ್ಬೀರ್ ಸಿಂಗ್ ಒಬ್ಬರು.

Posted by Sukhbir Singh Jaunapuria on Thursday, August 13, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...