ಉತ್ತರ ಪ್ರದೇಶದ ಎತಾದ ಮನೆಯಲ್ಲಿ 5 ಮೃತ ದೇಹಗಳು ಪತ್ತೆಯಾದ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆಯ ಸೊಸೆಯೇ ಕುಟುಂಬಸ್ಥರಿಗೆ ಆಹಾರದಲ್ಲಿ ವಿಷ ಬೆರೆಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಮುಗ್ಧ ಮಗುವನ್ನು ಕತ್ತು ಹಿಸುಕಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಮಹಿಳೆ ಯಾವುದೇ ವ್ಯಕ್ತಿ ಬದುಕಿರಬಾರದೆಂದು ಮುನ್ನೆಚ್ಚರಿಕೆ ವಹಿಸಿದ್ದಳಂತೆ.
ಮನೆಯ ನಾಲ್ವರನ್ನು ಹತ್ಯೆಗೈದ ಮಹಿಳೆ ನಂತ್ರ ತನ್ನ ನರ ಕತ್ತರಿಸಿದಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಬುಧವಾರ ತುಂಬಾ ಸಮಯ ಮನೆ ಬಾಗಿಲು ತೆರೆಯದ ಕಾರಣ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಭಾನುವಾರ ಮರಣೋತ್ತರ ಪರೀಕ್ಷೆ ವರದಿ ಬಂದಿದೆ. ಅದ್ರಲ್ಲಿ ಮೂವರಿಗೆ ವಿಷ ಬೆರಸಿದ್ದರೆ ಮಗ ಆರವ್ ಕತ್ತು ಹಿಸುಕಿ ಹತ್ಯೆ ಮಾಡಿರುವುದು ಬಹಿರಂಗವಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆ ಹಾಗೂ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುಟುಂಬದ ಉಳಿದ ಸದಸ್ಯರ ತನಿಖೆ ನಡೆಯುತ್ತಿದೆ.