alex Certify ಊರು ಸೇರುವ ತವಕದಲ್ಲಿದ್ದ 17 ಕಾರ್ಮಿಕರ ಪಾಲಿಗೆ ಯಮ ಸ್ವರೂಪಿಯಾಯ್ತು ರೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊರು ಸೇರುವ ತವಕದಲ್ಲಿದ್ದ 17 ಕಾರ್ಮಿಕರ ಪಾಲಿಗೆ ಯಮ ಸ್ವರೂಪಿಯಾಯ್ತು ರೈಲು

ಆ 17 ಮಂದಿ ವಲಸೆ ಕಾರ್ಮಿಕರು ಸಾರಿಗೆ ಸೌಲಭ್ಯವಿಲ್ಲದ ಕಾರಣ ನಡೆದುಕೊಂಡೇ ತಮ್ಮ ಊರಿಗೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಪೊಲೀಸರಿಗೆ ಸಿಕ್ಕಿ ಬಂದರೆ ಎಲ್ಲಿ ಕ್ವಾರಂಟೈನ್ ಆಗಬೇಕಾಗುತ್ತದೋ ಎಂಬ ಕಾರಣಕ್ಕೆ ರೈಲು ಹಳಿ ಮೇಲೆ ಸಾಗುತ್ತಿದ್ದರು.

ಇದೇ ಅವರ ಪಾಲಿಗೆ ಈಗ ಮುಳುವಾಗಿದೆ. ನಡೆದು ನಡೆದು ಸುಸ್ತಾಗಿ ರೈಲು ಹಳಿ ಮೇಲೆ ಮಲಗಿದ್ದ ವೇಳೆ ಬಂದ ಗೂಡ್ಸ್ ರೈಲು 17 ವಲಸೆ ಕಾರ್ಮಿಕರಿಗೆ ಪಾಲಿಗೆ ಮೃತ್ಯು ಸ್ವರೂಪಿಯಾಗಿ ಪರಿಣಮಿಸಿದೆ. ಸುಖ ನಿದ್ರೆಯಲ್ಲಿದ್ದವರು ಮಲಗಿದ್ದಲ್ಲೇ ಹೆಣವಾಗಿದ್ದಾರೆ.

ಇಂತದೊಂದು ಘೋರ ದುರಂತ ಘಟನೆ ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ಸಂಭವಿಸಿದ್ದು, ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ವಲಯದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಈ 17 ಮಂದಿ ಈಗ ಸಾವಿಗೀಡಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...