ಮಂಗಳವಾರ ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂಪಾಯಿ ಮೊತ್ತದ ಬೃಹತ್ ಪ್ಯಾಕೇಜ್ ಘೋಷಿಸಿದ್ದರು. ಇದರ ಸಂಪೂರ್ಣ ವಿವರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ ಎಂದು ನರೇಂದ್ರ ಮೋದಿ ತಿಳಿಸಿದ್ದರು.
ಅದರಂತೆ ಇಂದು ಸಂಜೆ 4 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದ ಆತ್ಮ ನಿರ್ಭರ್ ಭಾರತದ ಅರ್ಥವನ್ನು ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಹೇಳಿದ್ದಾರೆ.
ನಾನು ದಕ್ಷಿಣ ಭಾರತದಿಂದ ಬಂದಿರುವುದರಿಂದ ಅಲ್ಲಿನ ನಾಲ್ಕು ಭಾಷೆಗಳಲ್ಲಿ ಪ್ರಧಾನಿಯವರು ಹೇಳಿದ್ದ ಆತ್ಮ ನಿರ್ಭರ್ ಭಾರತದ ಅರ್ಥವನ್ನು ಹೇಳುತ್ತಿದ್ದೇನೆ ಎಂದ ಅವರು, ಕನ್ನಡದಲ್ಲಿ ಇದನ್ನು ಸ್ವಯಂ ಅವಲಂಬಿತ ಭಾರತ ಯೋಜನೆ ಎನ್ನಬಹುದು ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ದೇಶ ಸ್ವಾವಲಂಬಿಯಾಗಬೇಕಾಗುತ್ತದೆ ಎಂಬ ಸಂದೇಶ ರವಾನಿಸಿದರು.