alex Certify ಅಯೋಧ್ಯೆ, ಪ್ರಯಾಗ್ ​ರಾಜ್​​ ಬಳಿಕ ಮತ್ತೊಂದು ಜಿಲ್ಲೆ ಹೆಸರಿನ ಮೇಲೆ ಯೋಗಿ ಸರ್ಕಾರದ ಕಣ್ಣು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಯೋಧ್ಯೆ, ಪ್ರಯಾಗ್ ​ರಾಜ್​​ ಬಳಿಕ ಮತ್ತೊಂದು ಜಿಲ್ಲೆ ಹೆಸರಿನ ಮೇಲೆ ಯೋಗಿ ಸರ್ಕಾರದ ಕಣ್ಣು..!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ಸರ್ಕಾರವು ಸುಲ್ತಾನಪುರದ ಹೆಸರನ್ನು ಕುಶ್​ ಭವನ್​ಪುರ ಎಂದು ಬದಲಾಯಿಸುವ ಬಗ್ಗೆ ಯೋಚನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಕುಶ ಶ್ರೀರಾಮ ಹಾಗೂ ಸೀತಾಮಾತೆಯ ಪುತ್ರನ ಹೆಸರಾಗಿದೆ.

ಕಂದಾಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ ಕಂದಾಯ ಇಲಾಖೆಯು ಈ ಪ್ರಸ್ತಾವನೆಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಕಳುಹಿಸಿದೆ.

ಈ ಪ್ರಸ್ತಾವನೆಗೆ ಕ್ಯಾಬಿನೆಟ್​ನಲ್ಲಿ ಅನುಮೋದನೆ ಸಿಗಲಿದೆ ಎಂದು ತಿಳಿದುಬಂದಿದೆ.

ಸುಲ್ತಾನಪುರದ ಬಿಜೆಪಿ ಶಾಸಕ ದೇವಮಣಿ ದ್ವಿವೇದಿ 2018ರಲ್ಲೇ ಈ ವಿಚಾರದ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು.

ಒಂದು ವೇಳೆ ಸುಲ್ತಾನಪುರದ ಹೆಸರು ಬದಲಾಗಿದ್ದೇ ಹೌದಾದಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯ ನಾಥ್​ ಸರ್ಕಾರವು ಮೂರನೇ ಜಿಲ್ಲೆಯ ಹೆಸರನ್ನು ಬದಲಾಯಿಸಿದಂತೆ ಆಗುತ್ತದೆ. ಈ ಮೊದಲು ಫೈಝಾಬಾದ್​ನ್ನು ಅಯೋಧ್ಯೆ ಎಂದೂ ಅಲಹಾಬಾದ್​ನ್ನು ಪ್ರಯಾಗ್​ರಾಜ್​ ಎಂದು ಬದಲಾಯಿಸಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...